ಪಂಚಾಂಗ
ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷ ಋತು, ಶ್ರವಣ ಮಾಸ, ಕೃಷ್ಣ ಪಕ್ಷ,
ವಾರ: ಮಂಗಳವಾರ, ತಿಥಿ : ದ್ವಿತೀಯ, ನಕ್ಷತ್ರ : ಪುಬ್ಬಾ
ರಾಹುಕಾಲ : 3.31 ರಿಂದ 5.04
ಗುಳಿಕಕಾಲ : 12.25 ರಿಂದ 1.58
ಯಮಗಂಡಕಾಲ : 9.19 ರಿಂದ 10.52
ಹವಾಮಾನ ಫಲ.
ಮಳೆ ಮತ್ತು ಬಿಸಿಲಿನ ಮಿಶ್ರಣ ವಿರಲಿದೆ. ಬಯಲು ಸೀಮೆಯಲ್ಲಿ ಶುಷ್ಕ ವಾತಾವರಣ ಮುಂದುವರೆಯಲಿದೆ.
ಉದ್ಯೋಗ ಫಲ.
ಕಾರ್ಮಿಕರಿಗೆ ಲಾಭ,ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಇರದು,ಹೋಟಲ್,ಬಂಗಾರಕೆಲಸ,ಖಾಸಗಿ ಉದ್ಯೋಗಿಗಳಿಗೆ ಲಾಭ ಹೆಚ್ಚು ಇರದು, ಮೀನುಗಾರರ,ಕೃಷಿಕರು, ಇದನ್ನು ನಂಬಿದ ವ್ಯಾಪಾರಿಗಳಿಗೆ ಮಧ್ಯಮ ಲಾಭ.
ಮೇಷ: ಯತ್ನ ಕಾರ್ಯಗಳಲ್ಲಿ ಜಯ, ಸೌಖ್ಯ, ಉದ್ಯೋಗದಲ್ಲಿ ಬಡ್ತಿ, ನಾನಾ ಮೂಲಗಳಿಂದ ಸಂಪಾದನೆ,ಆರೋಗ್ಯ ಉತ್ತಮ,ಕುಟುಂಬ ಸೌಖ್ಯ.
ವೃಷಭ: ಈ ದಿನ ಮಿಶ್ರ ಫಲ,ಕೋಪ ಜಾಸ್ತಿ, ದುಃಖದಾಯಕ ಪ್ರಸಂಗಗಳು, ದ್ರವ್ಯನಾಶ, ಪಾಪಬುದ್ಧಿ, ಆರ್ಥಿಕ ಸುಧಾರಣೆ.
ಮಿಥುನ: ಹೊಸ ಕೆಲಸಗಳು ನಿಧಾನ ಗತಿಯಲ್ಲಿ ಸಾಗುವುದು,ಕುಟುಂಬ ಸೌಖ್ಯ,ಮನಃಶಾಂತಿ, ಭಯಭೀತಿ ನಿವಾರಣೆ, ಗುರು ಹಿರಿಯರಲ್ಲಿ ಭಕ್ತಿ.ಆರ್ಥಿಕ ತೊಂದರೆ ನಿಧಾನಗತಿಯಲ್ಲಿ ನಿವಾರಣೆ.
ಕಟಕ: ಪರರಿಗೆ ವಂಚಿಸುವುದು, ಪಾಪಬುದ್ಧಿ, ದಾರಿದ್ರ್ಯ, ಋಣಭಾದೆ, ಅಶುಭ ಫಲ.
ಸಿಂಹ: ಸ್ನೇಹಿತರಿಂದ ಸಹಾಯ, ಕುಟುಂಬ ಸೌಖ್ಯ, ವ್ಯಾಪಾರದಲ್ಲಿ ಅಲ್ಪ ಲಾಭ, ಮನಶಾಂತಿ.
ಕನ್ಯಾ: ಆರೋಗ್ಯ ಮಧ್ಯಮ, ಉದ್ಯೋಗದಲ್ಲಿ ಬಡ್ತಿ, ಧನಲಾಭ, ಕೆಲಸ ಕಾರ್ಯಗಳಲ್ಲಿ ಜಯ, ವಿವಾಹಕ್ಕಾಗಿ ಪ್ರಯಾಣ.
ತುಲಾ: ಅಧಿಕಾರಿಗಳಲ್ಲಿ ಕಲಹ, ಶತ್ರುಗಳಿಂದ ತೊಂದರೆ, ನೀಚ ಜನರ ಸಹವಾಸ, ಅನಗತ್ಯ ತಿರುಗಾಟ.
ವೃಶ್ಚಿಕ: ಸಲ್ಲದ ಅಪವಾದ, ಭೂಮಿ ಕಳೆದುಕೊಳ್ಳುವಿರಿ, ಆರ್ಥಿಕ ಪರಿಸ್ಥಿತಿ ಏರುಪೇರು.
ಧನಸ್ಸು: ಸ್ವಜನ ವಿರೋಧ, ಅಕಾಲ ಭೋಜನ, ಸ್ಥಳ ಬದಲಾವಣೆ, ಆಲಸ್ಯ ಮನೋಭಾವ, ಸಾಧಾರಣ ಫಲ.
ಮಕರ: ಸೇವಕರಿಂದ ಸಹಾಯ, ಐಶ್ವರ್ಯ ವೃದ್ಧಿ, ಕೆಲಸ ಕಾರ್ಯಗಳಲ್ಲಿ ಜಯ, ರಾಜ ಸನ್ಮಾನ.
ಕುಂಭ: ವ್ಯಾಸಂಗಕ್ಕೆ ತೊಂದರೆ, ದಾಯಾದಿ ಕಲಹ, ಅಧಿಕ ಖರ್ಚು, ಮನಃಸ್ತಾಪ.
ಮೀನ: ಕೆಲಸ ಕಾರ್ಯ ದಲ್ಲಿ ವಿಘ್ನ, ಚಂಚಲ ಮನಸ್ಸು, ದುಂದು ವೆಚ್ಚ,ಎಲ್ಲಿ ಹೋದರು ಅಶಾಂತಿ, ಧನವ್ಯಯ, ಭಯಭೀತಿ, ದ್ರವ್ಯನಾಶ.