



ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ಶ್ರವಣ ಮಾಸ, ಶುಕ್ಲ ಪಕ್ಷ,
ವಾರ: ಭಾನುವಾರ,
ತಿಥಿ: ಸಪ್ತಮಿ,
ನಕ್ಷತ್ರ: ವಿಶಾಖ,
ರಾಹುಕಾಲ: 5.09 ರಿಂದ 6.42
ಗುಳಿಕಕಾಲ: 3.35 ರಿಂದ 5.09
ಯಮಗಂಡಕಾಲ: 12.27 ರಿಂದ 2.01
ಹವಾಮಾನ ಫಲ
ಬಿಸಿಲು ಮಳೆಯ ಮಿಶ್ರಣ ವಿರಲಿದೆ, ಅಲ್ಲಲ್ಲಿ ಅಲ್ಪ ಮಳೆ ಇಂದು ಇದ್ದು ರಾತ್ರಿ ವೇಳೆ ಚಳಿ ಬೀಳಲಿದೆ. ಬಯಲು ಸೀಮೆ ಭಾಗದಲ್ಲಿ ಮಳೆ ಇರದು, ಕರಾವಳಿ ,ಮಲೆನಾಡು ಭಾಗ ಮಳೆ ಇರುವುದು.
ಉದ್ಯೋಗ ಫಲ.
ಯಂತ್ರ, ಕೃಷಿ ಉದ್ಯಮಗಳಿಗೆ ಲಾಭ, ರೈತರಿಗೆ,ಉದ್ಯೋಗಿಗಳಿಗೆ ಚೇತರಿಕೆ, ಹೋಟಲ್, ಇದನ್ನು ನಂಬಿದ ಉದ್ಯೋಗಿಗಳಿಗೆ ನಷ್ಟ, ಕಿರಾಣಿ ಅಂಗಡಿಗಳಿಗೆ ಮಧ್ಯಮ ಲಾಭ,
ಮೇಷ: ಇಂದು ಮಿಶ್ರ ಫಲ ವಿದೆ, ಮನಃಶಾಂತಿ,ಕಾರ್ಯ ವಿಕಲ್ಪ, ಶತ್ರು ಭಾದೆ,ದುಡುಕು ಸ್ವಭಾವ, ಸ್ಥಳ ಬದಲಾವಣೆ,ಪರರಿಗೆ ವಂಚಿಸುವಿರಿ, ಅಕಾಲ ಭೋಜನ,ಆರೋಗ್ಯ ಮಧ್ಯಮ.
ವೃಷಭ: ಕೆಲಸ ಕಾರ್ಯಗಳಿಗಾಗಿ ಅನಗತ್ಯ ತಿರುಗಾಟ, ಯತ್ನ ಕೆಲಸಗಳಲ್ಲಿ ಪ್ರಗತಿ, ಅನಾರೋಗ್ಯ, ನಂಬಿದ ಜನರಿಂದ ಮೋಸ, ಧನ ನಷ್ಟ, ವಾಹನ ಸಂಚಾರದಿಂದ ತೊಂದರೆ ಎಚ್ಚರ.
ಮಿಥುನ: ಸ್ತ್ರೀ ಲಾಭ,ಸನ್ಮಾನ, ಇಷ್ಟಾರ್ಥಸಿದ್ಧಿ, ದ್ರವ್ಯಲಾಭ, ಯಾರನ್ನು ಹೆಚ್ಚಾಗಿ ನಂಬಬೇಡಿ, ಅಲ್ಪ ಲಾಭ ಅಧಿಕ ಖರ್ಚು, ಸುಖ ಭೋಜನ, ಮನಃಶಾಂತಿ.
ಕಟಕ: ಅನ್ಯ ಜನರಲ್ಲಿ ವೈಮನಸ್ಸು, ವ್ಯಾಪಾರದಲ್ಲಿ ಸಾಧಾರಣ ಲಾಭ, ವಿವಾಹ ಯೋಗ,ಸ್ನೇಹಿತರ ಬೆಂಬಲ, ದುಃಖದಾಯಕ ಪ್ರಸಂಗಗಳು, ಪಾಪಬುದ್ಧಿ, ಖರ್ಚು ಜಾಸ್ತಿ.
ಸಿಂಹ: ಮಾತಾ ಪಿತರಲ್ಲಿ ಪ್ರೀತಿ-ವಾತ್ಸಲ್ಯ, ಮನಃಶಾಂತಿ, ಕುಟುಂಬ ಸೌಖ್ಯ, ಹಿತಶತ್ರುಗಳಿಂದ ತೊಂದರೆ, ಇಲ್ಲ ಸಲ್ಲದ ಅಪವಾದ ಎಚ್ಚರ, ಅಕಾಲ ಭೋಜನ.
ಕನ್ಯಾ: ನೆಮ್ಮದಿಯ ಜೀವನ, ಕುಟುಂಬದೊಡನೆ ಪ್ರಯಾಣ, ಸಭೆ ಸಮಾರಂಭಕ್ಕೆ ಭೇಟಿ, ಚಂಚಲ ಮನಸ್ಸು,ಕೆಟ್ಟ ಆಲೋಚನೆ, ಆರೋಗ್ಯದಲ್ಲಿ ತೊಂದರೆ,ವಾಹನ ಖರೀದಿ.
ತುಲಾ: ಮಾನಸಿಕ ನೆಮ್ಮದಿ, ಅಮೂಲ್ಯ ವಸ್ತು ಖರೀದಿ, ಸ್ಥಳ ಬದಲಾವಣೆ, ಅಧಿಕ ಧನವ್ಯಯ, ಮನಃಸ್ತಾಪ, ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ, ಅಕಾಲ ಭೋಜನ.
ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಸಹಾಯ, ಷೇರು ವ್ಯವಹಾರಗಳಲ್ಲಿ ನಷ್ಟ, ಎಚ್ಚರವಹಿಸಿ, ದೈವಿಕ ಚಿಂತನೆ, ಗೆಳೆಯರಿಂದ ಅನರ್ಥ, ಮನಸ್ಸಿನಲ್ಲಿ ಗೊಂದಲ.
ಧನಸು: ಮಾನಸಿಕ ನೆಮ್ಮದಿ, ಆಧ್ಯಾತ್ಮದ ವಿಚಾರದಲ್ಲಿ ಬೆಂಬಲ, ಮನಶಾಂತಿ ಲಭಿಸುತ್ತದೆ, ಪ್ರತಿಭೆಗೆ ತಕ್ಕ ಫಲ, ಆತ್ಮೀಯರ ಸಲಹೆ.
ಮಕರ: ಯತ್ನ ಕಾರ್ಯಗಳಲ್ಲಿ ವಿಘ್ನ, ಊರೂರು ಸುತ್ತಾಟ, ಮಾತಿನ ಚಕಮುಕಿ, ವಾಹನ ಅಪಘಾತವಾಗುವ ಸಾಧ್ಯತೆ, ಋಣಭಾದೆ, ಮನಕ್ಲೇಷ,ಅನಾರೋಗ್ಯ.
ಕುಂಭ: ಭೋಗವಸ್ತು ಪ್ರಾಪ್ತಿ, ಧನಲಾಭ, ಬಾಕಿ ವಸೂಲಿ, ಮನಃಶಾಂತಿ, ಸ್ತ್ರೀಯರಿಗೆ ಶುಭ, ಉದ್ಯೋಗದಲ್ಲಿ ಬಡ್ತಿ, ಪರರಿಗೆ ಸಹಾಯ ಮಾಡುವಿರಿ.
ಮೀನ: ವ್ಯಾಪಾರಿಗಳಿಗೆ ಉತ್ತಮ, ತೀರ್ಥಯಾತ್ರೆ ದರ್ಶನ, ಮಾತೃವಿನಿಂದ ಸಹಾಯ, ಸುಖ ಭೋಜನ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಸಣ್ಣಪುಟ್ಟ ವಿಷಯಗಳಿಗೆ ಕಲಹ,ಆರೋಗ್ಯ ಸುಧಾರಣೆ.