ಕಾರವಾರ:- ಬೈಕ್ ಮತ್ತು ಬೊಲೇರೋ ವಾಹನದ ನಡುವೆ ಅಪಘಾತವಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮುಂಡಾರದಲ್ಲಿ ನೆಡೆದಿದೆ.
ಅಪಘಾತ ಪಡಿಸಿ ಬೊಲೆರೋ ವಾಹನ ಸವಾರ ಪರಾರಿಯಾಗಿದ್ದಾನೆ.ಹೊನ್ನಾವರ ತಾಲೂಕಿನ ಹಳಗೇರಿ ನಿವಾಸಿ ಸುಬ್ರಹ್ಮಣ್ಯ ರಾಮ ಗೌಡ ಮೃತಪಟ್ಟ ಬೈಕ್ ಸವಾರನಾಗಿದ್ದು ಕೆಲಸಕ್ಕಾಗಿ ಹೊನ್ನಾವರಕ್ಕೆ ತೆರಳುತಿದ್ದ ವೇಳೆ ಅಪಘಾತವಾಗಿದ್ದು ತಲೆಗೆ ಪೆಟ್ಟಿ ಬಿದ್ದಿದ್ದರಿಂದ ಸಾವು ಕಂಡಿದ್ದಾನೆ.
ಘಟನೆ ಸಂಬಂದ ಮಂಕಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.