ಕಾರವಾರ :- ಮಹಾದಾಯಿ ವಿಚಾರದಲ್ಲಿ ಗೋವಾ ,ಮಹಾರಾಷ್ಟ್ರದವರು ಅವರ ಪಾಪ್ಯುಲಾರಿಟಿಗೆ ಈ ರೀತಿ ಹೇಳಿಕೆ ನೀಡುತ್ತಾರೆ.
ಮಹಾರಾಷ್ಟ್ರ ,ಗೋವಾ ಒಂದೊಂದು ಹೇಳಿಕೆ ಕೊಡುತ್ತೆಇದಕ್ಕೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ,ಸುಪ್ರಿಂ ಹೇಳಿಕೆಗೆ ನಾವು ಬದ್ದರಾಗಿ ಇರುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಹೆಚ್ . ಈಶ್ವರಪ್ಪ ಹೇಳಿದರು.
ಇಂದು ಕಾರವಾರಕ್ಕೆ ಆಗಮಿಸಿದ್ದ ಅವರು ಕೆರೋಡಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ವೀಕ್ಷಿಸಿ ಮಾಧ್ಯಮಗಳೊಂದಿಗೆ ಮಾತನಾಡಿ ಮಹಾರಾಷ್ಟ್ರದ ಗಡಿ ವಿಚಾರದಲ್ಲೂ ಮಹಜನ್ ವರದಿಗೆ ನಾವು ಬದ್ಧರಾಗಿದ್ದೇವೆ.ಯಾರೋ ಒಬ್ಬರು ಹೇಳಿಕೆ ಕೊಟ್ಟರು ಅಂದರೆ ಅದಕ್ಕೆ ರಿಯಾಕ್ಷನ್ ಕೊಡಲು ಹೋಗುವುದಿಲ್ಲ,ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ, ಏನು ತೀರ್ಮಾನ ಆಗಿದೆ ಅದರಂತೆ ನಾವು ನೆಡೆದುಕೊಳ್ಳುತ್ತೇವೆ ಎಂದರು.
ಇನ್ನು ಮುಖ್ಯಮಂತ್ರಿ ಬದಲಾಬಣೆ ಕುರಿತು ಯತ್ನಾಳ್ ಹೇಳಿಕೆ ವಿಚಾರ ವಾಗಿ ಪ್ರತಿಕ್ರಿಯಿಸಿದ ಅವರು ಯಾರೋ ಒಬ್ಬರ ಹೇಳಿಕೆಗೆ ಬಹಳಾ ಮಹತ್ವ ಇಲ್ಲ,ಯತ್ನಾಳ್ ಹೇಳಿಕೆಯನ್ನು ನಾವು ಸೀರಿಯಸ್ ಆಗಿ ತೆಗೆದುಕೊಂಡಿಲ್ಲ.ಅವರ ಸಮಾದಾನಕ್ಕೆ ಹೇಳಿಕೆ ಕೊಡುತಿದ್ದಾರೆ.ಪಕ್ಷದ ಸೀಮಿತವನ್ನು ಮೀರಿ ಇವರೇ ಹೇಳಿಕೆ ಕೊಡುತ್ತಿರುವುದು ಪಕ್ಷ ಯಾವತ್ತೂ ಕ್ಷಮಿಸೋಲ್ಲ.
ರಾಜ್ಯ ದಿಂದ ಕೇಂದ್ರ ಶಿಸ್ತು ಸಮಿತಿಗೆ ಇವರ ಬಗ್ಗೆ ದೂರು ಸಲ್ಲಿಸಿದ್ದೇವೆ ಕ್ರಮ ತೆಗೆದುಕೊಳ್ಳುತ್ತಾರೆ.ಸಚಿವ ಸ್ಥಾನ ಗೊಂದಲ ಶಮನವಾಗಿದೆ.ಮುಖ್ಯಮಂತ್ರಿ ಯಡಿಯೂರಪ್ಪನವರು ಸಚಿವರ ಜೊತೆ ಕೂತು ಚರ್ಚೆ ಮಾಡಿ ಎಲ್ಲಾ ಸಮಸ್ಯೆ ಬಗೆಹರಿಸಿದ್ದಾರೆ ಎಂದರು.
ಪಂಚಮಸಾಲಿ ಪ್ರತಿಭಟನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವರುಅವರು ಅಪೇಕ್ಷೆ ಪಡುವುದು ತಪ್ಪಲ್ಲ,ಕ್ಯಾಬಿನೇಟ್ ನಲ್ಲಿ ಕುಳಿತು ಚರ್ಚೆ ಮಾಡುತ್ತೇವೆ.
ವಾಲ್ಮೀಕಿ ಸಮಾಜಕ್ಕೆ ಮೂರು ಪರ್ಸೆಂಟ್ ನಿಂದ ಏಳುವರೆ ಪರ್ಸೆಂಟ್ ಮೀಸಲು ಬೇಡಿಕೆ ಇದೆ,ಕುರುಬ ಸಮಾಜವನ್ನು ಎಸ್.ಟಿ ಗೆ ಸೇರಿಸಬೇಕು ಎಂಬ ಬೇಡಿಕೆ ಇದೆ.
ಪಂಚಮಸಾಲಿ 2a ಗೆ ಸೇರಿಸುವ ಬೇಡಿಕೆ ಇದೆ. ಯಾವುದು ಸಿಂಧು ಯಾವುದು ಅಸಿಂಧು ಎಂಬುದನ್ನು ರಾಜ್ಯ,ಕೇಂದ್ರ ಸರ್ಕಾರ ಕುಳಿತು ತೀರ್ಮಾನ ಮಾಡುತ್ತೆ.ರಾಜ್ಯ ಸರ್ಕಾರದ ಬಜೆಟ್ ಬಗ್ಗೆ ಮುಂದಿನ ತಿಂಗಳು 9ನೇ ತಾರೀಕು ಎಲ್ಲಾ ಇಲಾಖೆ ಸಭೆಯನ್ನು ಮುಖ್ಯಮಂತ್ರಿ ನೇತ್ರತ್ವದಲ್ಲಿ ಸಭೆ ಕರೆಯಲಾಗಿದೆ ಎಂದರು.