ಕಾರವಾರ/ಹಳಿಯಾಳ:-ಮತದಾನ ಮಾಡಿ ಬಂದ ಗ್ರಾಮ ಪಂಚಾಯತ್ ಸದಸ್ಯನೋರ್ವ ಹೃದಯಾಘಾತದಿಂದ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮುರ್ಕವಾಡದಲ್ಲಿ ನಡೆದಿದೆ.
ಲಕ್ಷ್ಮಣ ಶಿವಾರಾಯ ಮಾನೆ ( 60 ) ಮೃತ ದುರ್ದೈವಿಯಾಗಿದ್ದು ,ಮುರ್ಕವಾಡದ ಮತ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಿ ಬಂದಿದ್ದ ಅವರು ಮನೆಗೆ ತೆರಳುತಿದ್ದಂತೆ ಹೃದಯಾಘಾತವಾಗಿ ಸಾವು ಕಂಡಿದ್ದಾರೆ.