ನವದೆಹಲಿ :- ಚಂದ್ರಯಾನ-3 ಯೋಜನೆ ಕೈಗೊಳ್ಳುವ ಮೂಲಕ ಭಾರತದ ವಿಜ್ಞಾನಿಗಳು ಚಂದ್ರನನ್ನು ತಲುಪಿ ಯಶಸ್ವಿಯಾಗಿದ್ದಾರೆ.ನಂತರ ಆದಿತ್ಯ-ಎಲ್ 1 ಮಿಷನ್ ಲಾಂಚ್ ಮಾಡಿ ಸೂರ್ಯನ ಅಧ್ಯಯನಕ್ಕೂ ಮುನ್ನುಡಿ ಬರೆದಿದ್ದಾರೆ.
ಇದೀಗ ಈ ಎರಡು ಯಶಸ್ವಿನ ನಂತರ ಭಾರತದ ವಿಜ್ಞಾನಿಗಳು ಮತ್ತೊಂದು ಮಹತ್ತರವಾದ ಯೋಜನೆಯಾದ ಸಮುದ್ರಯಾನಕ್ಕೂ (Samudrayana) (Matsya-6000)
ಕೈ ಹಾಕಿದ್ದು ಮುಂದಿನ ವರ್ಷ 3 ಜನ ಸಮೇತ ಸಬ್ಮರ್ಸಿಬಲ್ ಮತ್ಸ್ಯ -6000 ಅನ್ನು ನೀರಿನ ಆಳಕ್ಕೆ ಕಳುಹಿಸಲಿದ್ದಾರೆ ಎಂದು ಕೇಂದ್ರ ಸಚಿವ ಕಿರನ್ ರಿಜಿಜು ಹೇಳಿದ್ದಾರೆ.
ಸಬ್ಮರ್ಸಿಬಲ್ ಮತ್ಸ್ಯ -6000 ಅನ್ನು ಮುಂದಿನ ವರ್ಷ ಲಾಂಚ್ ಮಾಡಲು ಚೆನ್ನೈನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (NIOT) ಯೋಜನೆ ರೂಪಿಸಿದೆ.
ಈ ಸಮುದ್ರಯಾನಕ್ಕೆ ಸಬ್ಮರ್ಸಿಬಲ್ ಮತ್ಸ್ಯ -6000 ಎಂದು ಹೆಸರಿಡಲಾಗಿದೆ. ಇದರಲ್ಲಿ ಒಟ್ಟು ಮೂವರು ಪ್ರಯಾಣ ಬೆಳಸಲಿದ್ದು ಇವರು ಸಮುದ್ರದ ಆಳದಲ್ಲಿ 6 ಸಾವಿರ ಮೀಟರ್ ಅಂದರೆ 6 ಕಿಲೋ ಮೀಟರ್ ಆಳದಲ್ಲಿ ಖನಿಜಗಳನ್ನು ಪತ್ತೆ ಮಾಡಲಿದ್ದಾರೆ. ನೀರಿನ ಆಳದಲ್ಲಿ ಕೋಬಾಲ್ಟ್ , ನಿಕ್ಕಲ್ , ಮ್ಯಾಂಗನೀಸ್, ಹೈಡ್ರೋಥರ್ಮಲ್ ಸಲ್ಫೈಡ್ ಮತ್ತು ಗ್ಯಾಸ್ ಹೈಡ್ರೇಟ್ ಖನಿಜಗಳನ್ನು ಶೋಧನೆ ಮಾಡಲಿದ್ದಾರೆ.
ಮೊದಲು ಎಷ್ಟು ಆಳದಲ್ಲಿ ಪರೀಕ್ಷೆ?
ಎರಡು ವರ್ಷದಿಂದ ಈ ಸಬ್ಮರ್ಸಿಬಲ್ ಮತ್ಸ್ಯ -6000 ಮಿಷನ್ ಅನ್ನು ಸಿದ್ದತೆ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು 500 ಮೀಟರ್ ಆಳದವರೆಗೆ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ 2024ರಲ್ಲಿ ಚೆನ್ನೈ ಕರಾವಳಿ ಮೂಲಕ ಬಂಗಾಳ ಕೊಲ್ಲಿಯಲ್ಲಿ ನೀರಿನ ಆಳಕ್ಕೆ ಕಳುಹಿಸಲಾಗುತ್ತದೆ. ಹೀಗಾಗಿ ಓಷನ್ ಟೆಕ್ನಾಲಜಿ ವಿಜ್ಞಾನಿಗಳು ಇದರ ವಿನ್ಯಾಸ, ವಸ್ತುಗಳ ಪರಿಕ್ಷೆ, ಪ್ರಮಾಣೀಕರಣ ಸೇರಿದಂತೆ ಇನ್ನು ಕೆಲ ತಂತ್ರಜ್ಞಾನದ ಪರೀಕ್ಷೆಯಲ್ಲಿ ವಿಜ್ಞಾನಿಗಳು ತೊಡಗಿದ್ದಾರೆ.
ಇನ್ನು ಇಂತಹ ಸಬ್ ಮರ್ಸಿಬಲ್ ಅನ್ನು ಇಡೀ ವಿಶ್ವದಲ್ಲೇ ಅಮೆರಿಕ, ರಷ್ಯಾ, ಜಪಾನ್, ಫ್ರಾನ್ಸ್ ಮತ್ತು ಚೀನಾ ಮಾತ್ರ ಅಭಿವೃದ್ಧಿ ಪಡಿಸಿವೆ. ಸದ್ಯ ಆರನೇ ರಾಷ್ಟ್ರವಾಗಿ ಭಾರತ ತಯಾರಿಸುತ್ತಿದ್ದು ಇದರಲ್ಲಿ ಜಯ ಸಿಗಲಿದೆ ಎನ್ನುವುದು ತಜ್ಞರ ಮಾತು.
ಒಟ್ಟಿನಲ್ಲಿ ಚಂದ್ರಯಾನ,ಸೂರ್ಯಯಾನ ನಂತರ ಇದೀಗ ಸಮುದ್ರಯಾನದ ಮೂಲಕ ವಿಜ್ಞಾನಿಗಳು ಭಾರತದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿರುವುದು ಭಾರತೀಯರಿಗೆ ಹೆಮ್ಮೆ ತರುವಂತದ್ದಾಗಿದೆ.