ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಕರೋನಾ ಆರ್ಭಟದಲ್ಲಿ ಇಳಿಕೆ ಕಂಡಿದೆ.ಇಂದು ಜಿಲ್ಲೆಯಲ್ಲಿ 456 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ. ಹತ್ತು ಜನ ಕರೋನಾಕ್ಕೆ ಬಲಿಯಾಗಿದ್ದಾರೆ.
ತಾಲೂಕುವಾರು ವಿವರ ಈ ಕೆಳಗಿನಂತಿದೆ:-

ಶಿವಮೊಗ್ಗ ಜಿಲ್ಲಾ ಆರೋಗ್ಯ ಇಲಾಖೆ ಹೆಲ್ತ್ ಬುಲಟಿನ್ ವಿವರ ಈ ಕೆಳಗಿನಂತಿದೆ:-

ರಾಜ್ಯ ಆರೋಗ್ಯ ಇಲಾಖೆ ಇಂದಿನ ಜಿಲ್ಲಾವಾರು ಹೆಲ್ತ್ ಬುಲಟಿನ್ ವಿವರ ಈ ಕೆಳಗಿನಂತಿದೆ:-


ಇನ್ನೆರೆಡು ದಿನಗಳಲ್ಲಿ ಲಾಕ್ ಡೌನ್ ಯಾವ ಹಂತದಲ್ಲಿರಬೇಕು ಎಂದು ನಿರ್ಣಯ-ಶಿವರಾಮ್ ಹೆಬ್ಬಾರ್ .
ಕಾರವಾರ:- ಜೂನ್ ಏಳಕ್ಕೆ ಲಾಕ್ ಡೌನ್ ಅವಧಿ ಮುಗಿಯುವುದರಿಂದ ಮುಖ್ಯಮಂತ್ರಿಗಳು ಅನೇಕ ಸಚಿವ ಸಂಪುಟ ಸಹೋದ್ಯೋಗಿಗಳ ಜೊತೆ ಚರ್ಚೆ ನಡೆಸಿದ್ದು, ಲಾಕ್ ಡೌನ್ ಯಾವ ಹಂತದಲ್ಲಿಡಬೇಕೆಂದು ಇನ್ನೆರಡು ದಿನಗಳಲ್ಲಿ ಅಂತಿಮಗೊಳಿಸಲಿದ್ದಾರೆಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಾತನಾಡಿದ ಅವರು, ನಮ್ಮ ನಮ್ಮ ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇವೆ. ಕರಾವಳಿ ಮಲೆನಾಡು ಹೊಂದಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆಗಾಲದ ಹಿನ್ನೆಲೆಯಲ್ಲಿ ರೈತರು, ಕೃಷಿಕರ ಬಗ್ಗೆ ಕಾಳಜಿ ವಹಿಸಿದ್ದೇವೆ. ಅವರಿಗೆ ತೊಂದರೆಯಾಗದ ರೀತಿಯಲ್ಲಿ ನಾವು ಕೂಡ ಕ್ರಮಗಳನ್ನ ಕೈಗೊಳ್ಳುತ್ತೇವೆ. ಮುಖ್ಯಮಂತ್ರಿಗಳ ತೀರ್ಮಾನ ಬಳಿಕ ನಾವು ವಿನಾಯಿತಿ ನೀಡಲಿದ್ದೇವೆ ಎಂದು ಶಿವರಾಮ ಹೆಬ್ಬಾರ್ ಹೇಳಿದ್ದಾರೆ.