ಕಾರವಾರ :- ಗೋವಾ ಮದ್ಯ ಸಾಗಾಟ ಮಾಡುತಿದ್ದ ಲಾರಿಗೆ ಹಿಂಭಾಗದಿಂದ ಬಾಕ್ಸೈಟ್ ಅದಿರು
ತುಂಬಿದ್ದ ಮತ್ತೊಂದು ಲಾರಿ ಅತೀ ವೇಗದಿಂದ ಬಂದು ಡಿಕ್ಕಿಹೊಡೆದ ಪರಿಣಾಮ ಏಳು ಲಕ್ಷ ಮೌಲ್ಯದ ಪರವಾನಿಗೆ ಹೊಂದಿದ ಗೋವಾ ಮದ್ಯ ಹೆದ್ದಾರಿಯಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದು ನಾಶವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ತೊಡೂರಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.
ಇದನ್ನೂ ಓದಿ:- ಚುನಾವಣೆಗಾಗಿ ಮೂರು ಜನರ ಗಡಿಪಾರು ವಿವರ ನೋಡಲು ಅಕ್ಷರದ ಮೇಲೆ ಕ್ಲಿಕ್ ಮಾಡಿ
ಗೋವಾದಿಂದ ಪಾಂಡಿಚರಿಗೆ ಕೊಂಡೊಯ್ಯುತಿದ್ದ ಗೋವಾ ಮದ್ಯದ ಲಾರಿಗೆ ಮಂಗಳೂರು ಕಡೆ ತೆರಳುತಿದ್ದ
ಬಾಕ್ಸೈಟ್ ಅದಿರು ತುಂಬಿದ ಲಾರಿ ಮದ್ಯ ತುಂಬಿದ್ದ ಲಾರಿಗೆ ಡಿಕ್ಕಿಯಾದ ಪರಿಣಾಮ ಘಟನೆ ನಡೆದಿದ್ದು ಘಟನೆಯಲ್ಲಿ ಬಾಕ್ಸೈಟ್ ತುಂಬಿದ್ದ ಲಾರಿ ಚಾಲಕ ಖಾನಾಪುರದ ರೂಪೇಶ್ ನಾರಾಯಣ ಪಾಟೀಲ್ ಸಾವು ಕಂಡಿದ್ದು ಮದ್ಯ ತುಂಬಿದ ಲಾರಿ ಚಾಲಕ ಸಹಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅತೀ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದ್ದು ,ಕಾರವಾರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.