BREAKING NEWS
Search

ಪಾಕಿಸ್ತಾನದ ವಿರುದ್ಧ ಗೆಲುವಿಗೆ 50 ವರ್ಷ – ಪ್ರಧಾನಿ ಮೋದಿ ಬೆಳಗಿಸಿದ್ದ ವಿಜಯ ಜ್ಯೋತಿ ಕಾರವಾರಕ್ಕೆ

590

ಕಾರವಾರ :- 1971 ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಸಶಸ್ತ್ರ ದಳವು ಗೆಲುವು ಸಾಧಿಸಿದ 50 ವರ್ಷಗಳು ಸಂದ ಹಿನ್ನಲೆಯಲ್ಲಿ ಇಂದು ಕಾರವಾರದ ಕದಂಬಾ ನೌಕಾನೆಲೆಯಲ್ಲಿ ವಿಜಯ ದಿನವನ್ನು ಆಚರಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೆಹಲಿಯಲ್ಲಿ ಬೆಳಗಿಸಿದ್ದ ವಿಜಯ್ ಜ್ಯೋತಿಯು ಇಂದು ಕಾರವಾರದ ಕದಂಬ ನೆಲೆಗೆ ಆಗಮಿಸಿದ್ದು, ಈ ಜ್ಯೋತಿಯನ್ನು ನೌಕಾಪಡೆಯ ಅಧಿಕಾರಿಗಳ ಸಮ್ಮುಖದಲ್ಲಿ ಕದಂಬಾ ನೌಕಾ ನೆಲೆಯಲ್ಲಿ ನಿರ್ಮಿಸಿರುವ ಯುದ್ಧ ಸ್ಮಾರಕದಲ್ಲಿ ನೌಕಾ ನೆಲೆಯ ಕಮಾಂಡಿಂಗ್ ಪ್ಲಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ರವರು ಜ್ಯೋತಿಯನ್ನು ಬರಮಾಡಿಕೊಂಡು ಗೌರವ ಸಲ್ಲಿಸಿದರು.

ಸ್ವರ್ಣಿಮ್ ವಿಜಯ ವರ್ಷ

1971ರಲ್ಲಿ ಭಾರತೀಯ ಶಸ್ತ್ರ ಪಡೆಯು ಪಾಕಿಸ್ತಾನದ ಸೈನ್ಯದ ಮೇಲೆ ನಿರ್ಣಾಯಕ ಹಾಗೂ ಐತಿಹಾಸಿಕ ವಿಜಯವನ್ನು ಪಡೆದು ಇದು ಬಾಂಗ್ಲಾ ದೇಶದ ಸೃಷ್ಟಿಗೆ ಸಹ ಕಾರಣವಾಯಿತು.

ಎರಡನೇ ಮಹಾಯುದ್ದದ ನಂತರ ಅತಿದೊಡ್ಡ ಮಿಲಿಟರಿ ಶರಣಾಗತಿಗೆ ಈ ಯುದ್ದ ಕಾರಣೀಭೂತವಾಗಿತ್ತು.
2020 ರ ಡಿಸೆಂಬರ್ 16 ರಿಂದ ರಾಷ್ಟ್ರವು ಭಾರತ -ಪಾಕ್ ಯುದ್ಧದ ಗೆಲುವಿನ 50 ವರ್ಷದ ಸಂಭ್ರಮಾಚರಣೆಯನ್ನು ಈ ಭಾರಿ ಸ್ವರ್ಣಿಮ್ ವಿಜಯ ವರ್ಷ ಎಂಬ ಹೆಸರಿನಲ್ಲಿ ದೇಶಾಧ್ಯಾಂತ ಆಚರಿಸಲಾಗುತ್ತಿದೆ.

ಯುದ್ಧದಲ್ಲಿ ಹುತಾತ್ಮರಾದವರನ್ನು ಸ್ಮರಿಸಲು ,ವಿಜಯಕ್ಕೆ ಕಾರಣರಾದವರನ್ನು ಗೌರವಿಸಲು ಮತ್ತು ವಿಜಯದ ಆಚರಣೆಯ ಸಾಂಕೇತಿಕವಾಗಿ ಭಾರತೀಯ ರಕ್ಷಣಾಪಡೆಗಳಿಂದ ಸ್ವರ್ಣಿಮ್ ವಿಜಯ ವರ್ಷ ವೆಂದು ಆಚರಿಸಲು ಪ್ರಧಾನಿ ಮೋದಿಯವರು ಕರೆ ನೀಡಿ,ಒಂದು ವರ್ಷದ ಕಾರ್ಯಕ್ರಮಗಳಿಗೆ ಡಿಸೆಂಬರ್ 16 ರಂದು ಪ್ರಧಾನಿ ಮೋದಿಯವರು ವಿಜಯ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದ್ದರು. ಈ ವಿಜಯಜ್ಯೋತಿಯು ಭಾರತದಾಧ್ಯಾಂತ ಸಂಚರಿಸುತಿದ್ದು ,ಡಿಸೆಂಬರ್ 15 ರಂದು ಈ ಜ್ಯೋತಿ ನವದೆಹಲಿಯಲ್ಲಿರುವ ರಾಷ್ಟ್ರೀಯ ಯುದ್ದ ಸ್ಮಾರಕವನ್ನು ತಲುಪಲಿದೆ.

ಇಂದು ಬಂದ ಜ್ಯೋತಿಯು ಸೆಪ್ಟಂಬರ್ 24 ರ ವರೆಗೆ ಕಾರವಾರದ ಕದಂಬ ನೌಕಾನೆಲೆಯಲ್ಲಿ ಇರಲಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!