
ಸಾಗರ : ಮಲೆನಾಡಿನ ಅತ್ಯಂತ ಪ್ರತಿಷ್ಠಿತ ಹಾಗೂ ಶ್ರೀಮಂತ ಬ್ಯಾಂಕ್ ಎನಿಸಿಕೊಂಡಿರುವ, ಸಾಗರದ ಗಣಪತಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷರಾಗಿ ಸಾಗರದ ವಿ,ಶಂಕರ್ ಆಯ್ಕೆಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರದ ವಿನೋಬ ನಗರದ ವಾಸಿಯಾಗಿರುವ ಶಂಕರ್ ವಕೀಲರಾಗಿ,ಹಾಡುಗಾರರಾಗಿ,ಪತ್ರಕರ್ತರಾಗಿ ,ಸಾಹಿತಿಯಾಗಿ ತಮ್ಮನ್ನು ತಾವು ಗುರುತಿಸಿಕೊಂಡವರು.