ಈ ದಿನದ ಪಂಚಾಂಗ
ಶ್ರೀ ಶಾರ್ವರಿ ನಾಮ ಸಂವತ್ಸರ,ಉತ್ತರಾಯಣ,
ಹೇಮಂತ ಋತು, ಪುಷ್ಯಮಾಸ,
ಶುಕ್ಲ ಪಕ್ಷ, ಪೌರ್ಣಿಮೆ,
ವಾರ: ಗುರುವಾರ, ಪುಷ್ಯ ನಕ್ಷತ್ರ
ರಾಹುಕಾಲ: 02:03 ರಿಂದ 3:30
ಗುಳಿಕಕಾಲ: 9:42 ರಿಂದ 11: 09
ಯಮಗಂಡಕಾಲ: 06:49 8:15
ಮೇಷ:ಈ ದಿನ ಆಶುಭ ಫಲ ಹೆಚ್ಚು, ವಾದ ವಿವಾದಗಳಲ್ಲಿ ಜಯ, ಆರೋಗ್ಯ ಸಮಸ್ಯೆಗಳು, ಬಂಧುಗಳಿಂದ ಆರ್ಥಿಕ ನಷ್ಟ,ಆರೋಗ್ಯ ಮಧ್ಯಮ,ನೌಕರರಿಗೆ ಒತ್ತಡ.
ವೃಷಭ: ಈ ದಿನ ಮಿಶ್ರ ಫಲ,ಸ್ವಂತ ವ್ಯಾಪಾರದವರಿಗೆ ಅನುಕೂಲ, ಆರೋಗ್ಯ ಉತ್ತಮ,ಅಪನಿಂದನೆ ಮಾನಹಾನಿ, ಅಧಿಕ ಖರ್ಚು,ವಾಹನದಿಂದ ತೊಂದರೆ.
ಮಿಥುನ:ಚಂಚಲ ಮನಸ್ಸು,ಆರೋಗ್ಯ ಸುಧಾರಣೆ,ತಿರುಗಾಟ, ಸ್ಥಿರಾಸ್ತಿ ಮಾರಾಟದಿಂದ ನಷ್ಟ, ಸರ್ಕಾರದಿಂದ ಅನುಕೂಲ, ಕುಟುಂಬದಲ್ಲಿ ಆತಂಕ, ಮಿಶ್ರ ಫಲ.
ಕಟಕ: ಈ ದಿನ ಮಾಡಿದ ಕೆಲಸಗಳು ಕೈ ಗೂಡುವವು,ಬಂಧು ಬಾಂಧವರ ಭೇಟಿ, ಸಹೋದರಿಯಿಂದ ಲಾಭ, ಕೆಲಸ ಕಾರ್ಯಗಳಲ್ಲಿ ಜಯ,ಉದ್ಯೋಗ ತೃಪ್ತಿ,ಆರೋಗ್ಯ ಉತ್ತಮ.
ಸಿಂಹ: ಕಷ್ಟಗಳಿದ್ದರೂ ಹಲವು ಮೂಲಗಳಿಂದ ಧನಾಗಮನ, ಉನ್ನತ ಹುದ್ದೆಯಲ್ಲಿರುವವರಿಗೆ ಬಡ್ತಿ, ಉದ್ಯೋಗಿಗಳಿಗೆ ಒತ್ತಡ,ಆರೋಗ್ಯ ಉತ್ತಮ.
ಕನ್ಯಾ:ಈ ದಿನ ಮಿಶ್ರ ಫಲ, ಅಸಡ್ಡೆ,ಸೋಮಾರಿತನ ನಿದ್ರೆ ಹೆಚ್ಚು,ಆಗಾಗ ಆಯಾಸ, ಅಧಿಕಾರಿಗಳಿಂದ ತೊಂದರೆ, ಆಕಸ್ಮಿಕವಾಗಿ ಹಣ ಲಭಿಸುವುದು, ಅಕ್ರಮ ಹಣಗಳಿಕೆ ಮನಸ್ಸು,ಆರೋಗ್ಯ ಉತ್ತಮ ಆದರೂ ಕಫ ,ಕೆಮ್ಮು ಭಾದೆ,ಕೆಲವರಿಗೆ ದೇಹದಲ್ಲಿ ತುರಿಕೆ ಪಿತ್ತಾಂಶ ಹೆಚ್ಚು.
ತುಲಾ: ಈ ದಿನ ಕೆಲಸ ಕೈ ಗೂಡದು,ಉದ್ಯೋಗ ನಷ್ಟ. ನಿದ್ರಾಭಂಗ, ಆಕಸ್ಮಿಕ ಪ್ರಯಾಣ ,ಜಗಳ,ವ್ಯಾಪಾರ ನಷ್ಟ ಮುಂತಾದ ಮಿಶ್ರ ಫಲ ಇರುವುದು.
ವೃಶ್ಚಿಕ: ಈ ದಿನ ಮಿಶ್ರ ಫಲ,ಉದ್ಯೋಗ ಪ್ರಾಪ್ತಿ, ಭೂ ವಿವಾದಗಳಿಂದ ಮುಕ್ತಿ, ದುರಾಲೋಚನೆಗಳಿಗೆ ಬಲಿ.
ಧನಸ್ಸು: ಸ್ನೇಹಿತರು ಶತ್ರುಗಳಾಗುವರು, ಉದ್ಯೋಗ ಸ್ಥಳದಲ್ಲಿ ಆತಂಕ, ಮಕ್ಕಳಲ್ಲಿ ಅಹಂಭಾವ ಮೊಂಡುತನ.
ಮಕರ: ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ತಂದೆಯಿಂದ ಮನೋವ್ಯಾಧಿ, ವಾಹನ ಅಪಘಾತಗಳಾಗುವ ಸಂಭವ.
ಕುಂಭ: ಶುಭ ಕಾರ್ಯ ನಡೆಯಲಿದೆ,ರಾಜಯೋಗದ ದಿನ, ಬಂಧುಗಳ ಆಗಮನ, ಮಕ್ಕಳಿಂದ ಅನುಕೂಲ,ಆರೋಗ್ಯ ಸುಧಾರಣೆ.
ಮೀನ: ಮಾನ ಹಾನಿ,ಆರೋಗ್ಯ ಅಲ್ಪ ಏರುಪೇರು, ಅಧಿಕ ಉಷ್ಣ, ಬಾಯಿ ಮತ್ತು ಗಂಟಲು ಉರಿ, ಸಾಲದ ಹಣ ಮರುಪಾವತಿ ಇಂದ ನೆಮ್ಮದಿ, ಆರ್ಥಿಕವಾಗಿ ಸ್ತಿರ.