ಉತ್ತರ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ನಲ್ಲಿ ಸಡಿಲಿಕೆ ಮಾಡಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಆದೇಶ ಮಾಡಿದ್ದಾರೆ. ಈ ಹಿಂದೆ ಅಗತ್ಯ ವಸ್ತು ಕರೀದಿಗೆ ಮಂಗಳವಾರ ಮತ್ತು ಶುಕ್ರವಾರ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು.ಆದರೇ ಇದೀಗ ಜನರ ದಟ್ಟಣೆ ತಪ್ಪಿಸಲು ಜನರ ಅಗತ್ಯ ವಸ್ತು ಕರೀದಿಗೆ ನಾಲ್ಕು ದಿನ ಅವಕಾಶ ಮಾಡಿಕೊಟ್ಟಿದೆ.
ಸೋಮವಾರ,ಮಂಗಳವಾರ,ಬುಧವಾರ,ಗುರುವಾರ ಅಗತ್ಯ ಕರೀದಿಗೆ ಅವಕಾಶ ಮಾಡಿಕೊಟ್ಟಿದ್ದು ,ಈ ಹಿಂದೆ ಬೆಳಗ್ಗೆ 6 ರಿಂದ 10 ಘಂಟೆ ವರೆಗೆ ಇದ್ದ ಸಮಯವನ್ನು ಬೆಳಗ್ಗೆ 8 ರಿಂದ 12 ರ ವರೆಗೆ ಏರಿಕೆ ಮಾಡಿ ಅವಕಾಶ ಮಾಡಿಕೊಟ್ಟಿದೆ. ಇನ್ನು ಶುಕ್ರವಾರ ,ಶನಿವಾರ,ಭಾನುವಾರ ಮಾತ್ರ ಸಂಪೂರ್ಣ ಲಾಕ್ ಡೌನ್ ಇರಲಿದೆ ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ರವರು ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿ
ಉತ್ತರ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆ. ವಾರದಲ್ಲಿ ನಾಲ್ಕು ದಿನ ಅವಕಾಶ: ವಿವರ ನೋಡಿ.
By adminಮೇ 27, 2021, 16:07 ಅಪರಾಹ್ನ0
Previous Postಉತ್ತರ ಕನ್ನಡ ಜಿಲ್ಲೆಯಲ್ಲಿ ಮೂರು ತಿಂಗಳ ಮಗುವನ್ನೂ ಬಿಟ್ಟಿಲ್ಲ ಕರೋನಾ! ಹೇಗಿದೆ ಈ ಭಾರಿ ವಿವರ ನೋಡಿ.
Next Postಉತ್ತರ ಕನ್ನಡ,ಶಿವಮೊಗ್ಗ ಇಂದಿನ ಕರೋನಾ ಪಾಸಿಟಿವ್ ವಿವರ ಇಲ್ಲಿದೆ.