BREAKING NEWS
Search

ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಾವಳಿಗರಿಗಿಂತ ಕರ್ತವ್ಯ ಪ್ರಜ್ಞೆ ಮೆರೆದ ಮಲೆನಾಡಿಗರಿಂದ ಅತೀ ಹೆಚ್ಚು ಮತದಾನ.

733

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಹಂತದ ಕರಾವಳಿ ಯಲ್ಲಿ ಆದ ಮತದಾನಕ್ಕಿಂತ ಮಲೆನಾಡು ಭಾಗದಲ್ಲಿ ಹೆಚ್ಚು ಮತದಾನವಾಗಿದೆ.
ಎರಡನೇ ಹಂತದಲ್ಲಿ 81.41% ಶೇಕಡವಾರು ಮತದಾನವಾಗಿದ್ದು ಮಲೆನಾಡು ಮತದಾರರು ತಮ್ಮ ಕರ್ತವ್ಯದ ಪ್ರಜ್ಞೆ ಮೆರೆದಿದ್ದಾರೆ.

ಶಿರಸಿ- 81.00
ಸಿದ್ದಾಪುರ- 82.20
ಯಲ್ಲಾಪುರ – 80.87
ಮುಂಡಗೋಡು- 83.99
ಹಳಿಯಾಳ- 84.64
ದಾಂಡೇಲಿ- 75.23
ಜೋಯಿಡಾ-76.32

ಒಟ್ಟು :- 81.41 % ಶೇಕಡ ಮತದಾನ

ಮೊದಲ ಹಂತದಲ್ಲಿ ಕರಾವಳಿಯಲ್ಲಿ ಆದ ಮತದಾನದ ವಿವರ:-

ಒಟ್ಟು ಮತದಾನ ಶೇ.74.83%

ಕಾರವಾರ : 71.22

ಅಂಕೋಲಾ‌ : 75.84

ಕುಮಟಾ : 75.3

ಹೊನ್ನಾವರ: 76.17

ಭಟ್ಕಳ : -74.63

ಗಣ್ಯರ ಮತದಾನ :-

ಯಲ್ಲಾಪುರದಲ್ಲಿ ಸಚಿವ ಶಿವರಾಮ್ ಹೆಬ್ಬಾರ್ ರವರು ಹೆಬೈಲಿನ ಬೂತ್ ನಲ್ಲಿ ಪತ್ನಿ ವನಜಾಕ್ಷಿ ,ಪುತ್ರ ವಿವೇಕ್ ರೊಂದಿಗೆ ಆಗಮಿಸಿ ಮತದಾನ ಮಾಡಿದರು.

ಶಿರಸಿಯ ಸೊಂದದ ಸ್ವರ್ಣವಳ್ಳಿ ಶ್ರೀಗಳು ಸೊಂದ ಪಂಚಾಯಿತ್ ನ ಖಾಸಾಪಾಲ, ಶಾಲೆ
ಮಠದೇವಳ ಮತಗಟ್ಟೆಯಲ್ಲಿ ಮತದಾನದ ಹಕ್ಕು ಚಲಾಯಿಸಿದರು.

ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಜನತಾ ವಿದ್ಯಾಲಯದ ಕುಳವೆಗೆ ತೆರಳಿ ಕುಳವೆ ಗ್ರಾಮಪಂಚಾಯ್ತಿ ಕ್ಷೇತ್ರಕ್ಕೆ ಮತದಾನ ಮಾಡಿದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!