ಗೋವಾ ಮೂಲದ ಕೇಂದ್ರ ಆಯುಷ್ ಇಲಾಖೆ ಸಚಿವ ಶ್ರೀಪಾದ್ ನಾಯಕ್ ರವರ ಕಾರು ಪಲ್ಟಿಯಾಗಿ ಸಚಿವರ ಪತ್ನಿ ಹಾಗೂ ಆಪ್ತ ಕಾರ್ಯದರ್ಶಿ ಮೃತರಾದ ಘಟನೆ ನಡರದಿದ್ದು ಸಚಿವರು ಗಂಭೀರ ಗಾಯಗೊಂಡಿದ್ದಾರೆ.


ಅಂಕೋಲಾ ತಾಲೂಕಿನ ಹೊಸಕಂಬಿ ಗ್ರಾಮದ ಬಳಿ ಘಟನೆ ನಡೆದಿದೆ. ಗೋವಾ ದಿಂದ ಯಲ್ಲಾಪುರಕ್ಕೆ ಪತ್ನಿಯೊಂದಿಗೆ ಬಂದಿದ್ದ ಅವರು ಚಾಲಕ ಸೇರಿ ನಾಲ್ಕು ಜನ ರಾತ್ರಿ ವೇಳೆ ಗೋಕರ್ಣಕ್ಕೆ ತೆರಳುತಿದ್ದರು. ಈವೇಳೆ ಗಾಡಿ ಪಲ್ಟಿಯಾಗಿದ್ದು ಸಚಿವ ಶ್ರೀಪಾದ್ ನಾಯಕ್ ರವರು ಗಂಭೀರ ಗಾಯ ಗೊಂಡಿದ್ದು ಪತ್ನಿ ವಿಜಯ ರವರು ಹಾಗೂ ಸಚಿವರ ಆಪ್ತಕಾರ್ಯದರ್ಶಿ ದೀಪಕ ರಾಮದಾದ ಗೂಮೆ ಕೂಡಾ ಸಾವು ಕಂಡಿದ್ದಾರೆ.