ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನ ದಿಂದ ದಿನಕ್ಕೆ ಕರೋನಾ ಸೋಂಕಿನ ಪ್ರಮಾಣ ಏರಿಕೆ ಆಗುತ್ತಲಿದೆ. ಹೀಗಿರುವಾಗ ಜಿಲ್ಲಾಡಳಿತ ಸಹ ಕಠಿಣ ಕ್ರಮವನ್ನು ಜಾರಿ ಗೊಳಿಸಿದೆ.
ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರವಾಸಿಗರು ದಾಂಡೇಲಿ ತಾಲೂಕಿಗೆ ಬರುತ್ತಾರೆ. ಈ ಹಿಂದೆ ದಾಂಡೇಲಿ-ಹಳಿಯಾಳ ತಾಲೂಕುಗಳು ಸೇರಿ 6679ಜನರು ಕರೋನಾ ಸೋಂಕಿತರಾಗಿದ್ದು 123 ಜನ ಕರೋನಾಕ್ಕೆ ಬಲಿಯಾಗಿದ್ದಾರೆ. ಹೀಗಾಗಿ ಪ್ರವಾಸಿಗರು ಹೆಚ್ಚು ಬರುವ ದಾಂಡೇಲಿ ತಾಲೂಕಿನಲ್ಲಿ ಕಠಿಣ ಕರೋನಾ ನಿಯಮವನ್ನು ಜಾರಿಗೆ ತಂದಿದೆ. ಆದರೇ ಪ್ರವಾಸಿಗರು ಸೇರಿದಂತೆ ಸ್ಥಳೀಯರು ಕರೋನಾ ನಿಯಮಗಳನ್ನು ಗಾಳಿಗೆ ತೂರುತಿದ್ದು ಇದೀಗ ಸ್ಥಳೀಯ ಆಡಳಿತ ಮಾಸ್ಕ ಧರಿಸದ ಜನರ ವಿರುದ್ಧ ಕಾರ್ಯಾಚರಣೆ ನಡೆಸಿ ದಂಡದ ಬಿಸಿ ಮುಟ್ಟಿಸುತಿದ್ದಾರೆ.
ಕಳೆದ 9 ದಿನದಲ್ಲಿ ₹1,02,800 ರೂ ದಂಡವನ್ನು ಕೇವಲ ಮಾಸ್ಕ್ ಧರಿಸದವರಿಂದ ವಸೂಲಿ ಮಾಡಿದೆ.
ಮೂರನೆ ಅಲೆ ತಡೆಗೆ ನಗರದ ತಾಲೂಕಾಡಳಿತ, ನಗರಾಡಳಿತ, ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತಿದೆ. ಮಾಸ್ಕ್ ಧರಿಸದವರನ್ನು ಗುರುತಿಸಿ ದಂಡ ವಸೂಲಿ ಮಾಡಲಾಗಿದ್ದು ಆಗಸ್ಟ್ 1ರಿಂದ 9ರವೆರೆಗೆ ಕೇವಲ ಒಂಭತ್ತು ದಿನದಲ್ಲಿ 1,02,800 ರೂಗಳನ್ನು ಇಲ್ಲಿನ ನಗರಾಡಳಿತ, ತಾಲೂಕಾಡಳಿತ, ಪೊಲೀಸ್ ಇಲಾಖೆ ಸಹಕಾರದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಸಂಗ್ರಹ ಮಾಡಲಾಗಿದೆ ಎಂದು ತಹಶೀಲ್ದಾರ್ ಶೈಲೇಶ್ ತಿಳಿಸದ್ದಾರೆ.