BREAKING NEWS
Search

₹2,50000 ಕ್ಕೆ ಹರಾಜಾಯ್ತು ಮಾರುತಿ ದೇವರ ಹಣ್ಣುಕಾಯಿ ಪ್ರಸಾದ

2233

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಪ್ರಸಿದ್ಧ ಶ್ರೀ ಮಾರುತಿ ದೇವಸ್ಥಾನದಲ್ಲಿ ದೇವರಿಗೆ ನೈವೆದ್ಯ ಇರಿಸಿದ್ದ ಹಣ್ಣುಕಾಯಿ ಪ್ರಸಾದವು ಬರೋಬ್ಬರಿ ₹2.50ಲಕ್ಷಕ್ಕೆ ಹರಾಜು ಮಾಡಲಾಗಿದ್ದು, ಕಾರವಾರ ನಗರದ ಬ್ರಾಹ್ಮಣ ಗಲ್ಲಿಯ ಮಾರುತಿ ದಾಮೋದರ್ ಸ್ವಾರ್ ಎಂಬ ವ್ಯಾಪಾರಿಯು ಹರಾಜಿನಲ್ಲಿ ಪ್ರಸಾದವನ್ನು ಪಡೆದುಕೊಂಡರು.

ಪ್ರತಿ ವರ್ಷ ಜನವರಿಯಲ್ಲಿ ಕಾರವಾರದ ಶ್ರೀ ಮಾರಿತಿ ದೇವಸ್ಥಾನದ ಜಾತ್ರಾಮಹೊತ್ಸವ ಹಾಗೂ ಪಲ್ಲಕ್ಕಿ ಉತ್ಸವ ನೆಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಮಾರುತಿ ದೇವರಿಗೆ ಇರಿಸುವ ಹಣ್ಣುಕಾಯಿ ಹಾಗೂ ಪುಷ್ಪಗಳನ್ನೊಳಗೊಂಡ ತಟ್ಟೆಯನ್ನು ಭಕ್ತರ ಎದುರು ಹರಾಜು ಹಾಕಲಾಗುತ್ತದೆ.


ಈ ಬಾರಿ ಸಹ ಈ ಹರಾಜಿನಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು. ಹೀಗಾಗಿ ದೇವರ ಪ್ರಸಾದಕ್ಕೆ ಭಕ್ತರಲ್ಲಿ ಪೈಪೋಟಿಯ ಹರಾಜು ಪ್ರಕ್ರಿಯೆ ನಡೆದು ಕೊನೆಯಲ್ಲಿ ₹2.50 ಲಕ್ಷಕ್ಕೆ ಹರಾಜು ಮುಕ್ತಾಯವಾಯಿತು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!