ಕಾರವಾರ:- ಸಮುದ್ರ ಪಾಲಾಗುತಿದ್ದ ಪ್ರವಾಸಿಗನನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಕಡಲತೀರದಲ್ಲಿ ಇಂದು ನಡೆದಿದೆ.

ಶಿರಸಿ ಮೂಲದ ಅಭಯ್ (35)ರಕ್ಷಣೆಗೊಂಡ ಪ್ರವಾಸಿಗನಾಗಿದ್ದು ಇಂದು ಬೆಳಗ್ಗೆ ಶಿರಸಿಯಿಂದ ನಾಲ್ಕು ಜನರು ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದರು. ಪ್ರವಾಸಕ್ಕೆ ಬಂದ ನಾಲ್ಕು ಜನರು ಸಮುದ್ರದಲ್ಲಿ ಇಳಿದಿದ್ದರು. ಈ ವೇಳೆ ಶಿರಸಿಯ ಅಭಯ್ ಸಮುದ್ರದ ಅಲೆಗೆ ಸಿಲುಕಿ ಮುಳುಗಿದ್ದರು.
ತಕ್ಷಣ ಗಮನಿಸಿದ ಮುರುಡೇಶ್ವರದ ಓಷಿಯನ್ ಅಡ್ವೆಂವರ್ ಸಂಸ್ಥೆ ಯುವಕರು ರಕ್ಷಣೆ ಮಾಡಿದ್ದಾರೆ.