ಕಾರವಾರ :-ಉತ್ತರ ಕನ್ನಡ ಜಿಲ್ಲೆಯ ಹಲವು ಕಡೆ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ.
ಹೊನ್ನಾವರ,ಶಿರಸಿ,ಸಿದ್ದಾಪುರ,ಕುಮಟಾ ಭಾಗದಲ್ಲಿ ಗಾಳಿ ಸಹಿತ ಅಬ್ಬರದ ಮಳೆ ಸುರಿದರೆ, ಕಾರವಾರ ,ಅಂಕೋಲ ಭಾಗದಲ್ಲಿ ಅಲ್ಪ ಮಳೆ ಸುರಿದಿದೆ.
ಗಾಳಿ ಅಬ್ಬರಕ್ಕೆ ಗೋಕರ್ಣದ ತದಡಿ ಸಮುದ್ರದಲ್ಲಿ ಬೋಟ್ ಮುಳುಗಡೆಯಾಗಿ ಅದರಲ್ಲಿದ್ದ ಹದಿನಾಲ್ಕು ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.


ಬಂದರಿನಿಂದ 40 ನಾಟಿಕಲ್ ಮೈಲು ದೂರದಲ್ಲಿ ಘಟನೆ ನೆಡೆದಿದ್ದು
ಕುಮಟಾ ತಾಲೂಕಿನ ಮಿರ್ಜಾನ್ ಗ್ರಾಮದ ದುರ್ಗಾ ಭೈರವಿ ಎನ್ನುವ ಬೋಟ್ ಇದಾಗಿದ್ದು ,ಆಳ ಸಮುದ್ರದಲ್ಲಿ ಗಾಳಿ ರಭಸ ಹೆಚ್ಚಾಗಿದ್ದರಿಂದ ಮುಳುಗಡೆಯಾಗಿದೆ.