ಯಲ್ಲಾಪುರದಲ್ಲಿ ಆನೆ ಮರಿ ಸಾವು:ಅರಣ್ಯಾಧಿಕಾರಿಗಳಿಂದ ಅಂತ್ಯ ಸಂಸ್ಕಾರ.

668

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಮಂಚಿಕೇರಿ ಬಳಿ ಬೀಡು ಬಿಟ್ಟಿರುವ ಆನೆಗಳ ಹಿಂಡಿನಲ್ಲಿ ಹೆಣ್ಣಾನೆಯೊಂದು ಅವಧಿ ಪೂರ್ವದಲ್ಲಿ ಮರಿ ಹಾಕಿದ್ದು ಮರಿ ಸಾವುಕಂಡಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಈ ಭಾಗದಲ್ಲಿ ಆನೆಗಳ ಹಿಂಡು ಬೀಡುಬಿಟ್ಟಿತ್ತು.ಈ ವೇಳೆ ಹೆಣ್ಣಾನೆ ನಿನ್ನೆ ದಿನ ಅವಧಿ ಪೂರ್ವದಲ್ಲಿ ಮರಿಹಾಕಿದ್ದು ಸಾವನ್ನಪ್ಪಿದೆ. ಸ್ಥಳಕ್ಕೆ ಮಂಚಿಕೇರಿ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿ ಮರಿ ಆನೆಯನ್ನು ಅಂತ್ಯಸಂಸ್ಕಾರ ಮಾಡಲಾಯಿತು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!