ಕಾರವಾರ :- ಪ್ರಾಣಿಗಳ ಕಾಟ ತಪ್ಪಿಸಲು ವಿಷ ಬೆರೆಸಿದ ಅಕ್ಕಿ ತಿಂದು ಜಾನುವಾರುಗಳ (cow)ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ (joida)ತಾಲೂಕಿನ ನಾಗೋಡಾದಲ್ಲಿ (nagodu)ನಡೆದಿದೆ.
ವಿಷಪ್ರಾಷನದಿಂದ ಒಟ್ಟು ನಾಲ್ಕು ಎತ್ತು ಮತ್ತು ಒಂದು ಆಕಳುಗಳ ಸಾವು ಕಂಡಿದ್ದು ಇನ್ನೂ ಏಳು ಜಾನುವಾರುಗಳ ಸ್ಥಿತಿ ಚಿಂತಾಜನಕವಾಗಿದೆ.
ಅನಂತ ನರಸಿಂಹ ಭಾಗ್ವತ್ ಎಂಬುವವರ ತೋಟದಲ್ಲಿ ಈ ಘಟನೆ ನಡೆದಿದ್ದು ,ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ
ಕಾಡು ಪ್ರಾಣಿಗಳ ಕಾಟ ತಡೆಯಲು ಅನ್ನದ ಜೊತೆ ವಿಷ ಬೆರೆಸಿರುವುದು ಬೆಳಕಿಗೆ ಬಂದಿದೆ.
ಗೋವಿನ ಮಾಲೀಕರಾದ ಮಮತಾ ಮಹಾಬಲೇಶ್ವರ ಗಾಳಕರ ಎಂಬುವವರು(joida police) ಠಾಣೆಯಲ್ಲಿ ದೂರು ನೀಡಿದ್ದು ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳ ಭೇಟಿ. ಮರಣೋತ್ತರ ಪರೀಕ್ಷೆ ನಡೆಸಿದ್ದು ಜೊಯಿಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
(Cow poisoning)
ಇದನ್ನೂ ಓದಿ:- ಉತ್ತರ ಕನ್ನಡ ಜಿಲ್ಲೆಯ ಈ ಗ್ರಾಮಗಳಿಗೆ ನಾಳೆ ಒಂದು ದಿನ ನಿಷೇಧಾಜ್ಞೆ ಹೊರಡಿಸಿದ ಡಿ.ಸಿ.