BREAKING NEWS
Search

ಕರಾವಳಿಯಲ್ಲಿ ತಟ್ಟಿದ ಸಾರಿಗೆ ಮುಷ್ಕರ ಬಿಸಿ! ಬದಲಿ ವ್ಯವಸ್ಥೆ ಇಲ್ಲದೇ ಜನರ ಗೋಳು!

642

ಕಾರವಾರ :- ಸಾರಿಗೆ ಇಲಾಖೆ ನೌಕರರ ಮುಷ್ಕರದಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಚಾರ ಮಾಡುತಿದ್ದ 550 ಬಸ್‌ಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿದೆ. ಗ್ರಾಮೀಣ ಭಾಗಗಳಿಗೆ ಎಂದಿನಂತೆ ಟೆಂಪೊ ಸಂಚಾರ ಪ್ರಾರಂಭವಾಗಿದೆ.

ಮುಷ್ಕರವು ಅಧಿಕೃತವಾಗಿ ಬುಧವಾರ ಆರಂಭವಾದರೂ ವಿವಿಧೆಡೆ ಮಂಗಳವಾರ ಮಧ್ಯಾಹ್ನದ ನಂತರದಿಂದಲೇ ಚಾಲಕರು ಮತ್ತು ನಿರ್ವಾಹಕರು ಕರ್ತವ್ಯಕ್ಕೆ ಗೈರಾಗಿದ್ದರು. ಹಾಗಾಗಿ ಬೆಂಗಳೂರಿನಿಂದ ರಾತ್ರಿ ಹೊರಟು ಕಾರವಾರಕ್ಕೆ ಬೆಳಿಗ್ಗೆ ತಲುಪುವ ಕೆಲವು ಬಸ್‌ಗಳು ಬರಲಿಲ್ಲ.

ಕಾರವಾರ ನಗರಕ್ಕೆ ಗೋವಾ ಸಾರಿಗೆ ಸಂಸ್ಥೆಯ ಬಸ್‌ಗಳೂ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತವೆ. ಆದರೆ, ಇಂದು ಅವು ಸಹ ಬರಲಿಲ್ಲ.

ಪ್ರಯಾಣಿಕರಿಗೆ ತೊಂದರೆಯಾಗದಂತೆ ಸುಮಾರು 140 ಬಸ್‌ಗಳ ವ್ಯವಸ್ಥೆ ಮಾಡಿದ್ದಾಗಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧಿಕಾರಿಗಳಯ ತಿಳಿಸಿದ್ದಾರೆ. ಆದರೆ, ನಗರದ ಬಸ್ ನಿಲ್ದಾಣದಲ್ಲಿ ಒಂದೂ ಬಸ್ ಇಲ್ಲದೇ ಬಿಕೊ ಎನ್ನುತ್ತಿತ್ತು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!