ಶಿರಸಿ:ಪುನೀತ್ ಅಭಿಮಾನಿಗಳಿಂದ( Puneet Rajkumar fans) ಚಿತ್ರಮಂದಿರಕ್ಕೆ ಮುತ್ತಿಗೆ ಗಂಧದ ಗುಡಿ ಸಿನಿಮಾ ಪ್ರದರ್ಶನಕ್ಕೆ ಪಟ್ಟು
ಕಾರವಾರ :- ಪುನೀತ್ ನಟನೆಯ ಗಂಧದ ಗುಡಿ (Gandada Gudi film release)ಸಿನಿಮಾ ವನ್ನು ರಿಲೀಸ್ ಮಾಡುವಂತೆ ಒತ್ತಾಯಿಸಿ ಚಿತ್ರಮಂದಿರಕ್ಕೆ ಮುತ್ತಿಗೆಹಾಕಿ ಪ್ರತಿಭಟಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನಟರಾಜ ಚಿತ್ರಮಂದಿರ ದಲ್ಲಿ ನಡೆದಿದೆ. (Sirsi Nataraja Talkies)
ಉತ್ತರ ಕನ್ನಡ ಜಿಲ್ಲೆಯ ಹಲವು ಭಾಗದಲ್ಲಿ ಪುನೀತ್ ರವರ ದೃಶ್ಯವನ್ನು ಚಿತ್ರೀಕರಿಸಲಾಗಿದ್ದು Gandhada Gudi film shooting )ಅಪ್ಪು ರವರ ಕೊನೆಯ ಸಿನಿಮಾ ಕೂಡ ಇದಾಗಿದೆ.
ರಾಜ್ಯಾಧ್ಯಾಂತ 28 ಬಿಡುಗಡೆಯಿದೆ. ಆದ್ರೆ ಶಿರಸಿಯ ನಟರಾಜ ಚಿತ್ರಮಂದಿರದಲ್ಲಿ ಮಾತ್ರ ಬಿಡುಗಡೆ ಇಲ್ಲ. ಹೀಗಾಗಿ ತಮ್ಮೂರಿನಲ್ಲೂ ಅದೇ ದಿನ ಬಿಡುಗಡೆಮಾಡಬೇಕು ಎಂದು ಅಪ್ಪು ಅಭಿಮಾನಿಗಳು ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದು ಚಿತ್ರಮಂದಿರದ ಮಾಲೀಕರು ಸಹ ಅಭಿಮಾನಿಗಳ ಬೇಡಿಕೆಗೆ ಮಣಿದು ಒಪ್ಪಿದ್ದು ನಾಳೆ ಶಿರಸಿಯ ನಟರಾಜ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ.