26 ಜಿಲ್ಲೆಗಳಲ್ಲಿ ಇಂದು ಅಬ್ಬರದ ಮಳೆ? ಇಂದಿನ ಹವಾಮಾನ ವರದಿ.

2530

ರಾಜ್ಯದ ಹಲವು ಜಿಲ್ಲೆಗಳಲ್ಲಿ ಐದು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಕರಾವಳಿ ಹಾಗೂ ದಕ್ಷಿಣ ಕರ್ನಾಟಕ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ರಾಜ್ಯದಲ್ಲಿ ಸಾಧಾರಣ/ಗುಡುಗು ಮಿಂಚು ಸಹಿತ ಮಳೆಯಾಗಲಿದ್ದು ಮುಂದಿನ ಮೂರು ತಾಸಿನಲ್ಲಿ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಸಹಿತ ಭರ್ಜರಿ ಮಳೆಯಾಗಲಿದೆ.

ಧಾರವಾಡ,ಹಾವೇರಿ,ಗದಗ,ಕೊಪ್ಪಳ,ರಾಯಚೂರು,ಉತ್ತರ ಕನ್ನಡ,ಉಡುಪಿ,ದಕ್ಷಿಣ ಕನ್ನಡ,ಬಳ್ಳಾರಿ,ಬೆಂಗಳೂರು,ಚಾಮರಾಜನಗರ,ಚಿಕ್ಕಮಗಳೂರು,ಚಿತ್ರದುರ್ಗ ,ದಾವಣಗೆರೆ ,ಹಾಸನ ,ಕೊಡಗು,ಕೋಲಾರ,ಮಂಡ್ಯ,ಮೈಸೂರು,ರಾಮನಗರ,ಶಿವಮೊಗ್ಗ,ತುಮಕೂರು ಈ ಭಾಗದಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಕರಾವಳಿ ಭಾಗದಲ್ಲಿ ಮೇ 18 ಕ್ಕೆ ಭಾರೀ ಮಳೆಯಾಗುವ ಸಾಧ್ಯತೆ ಹಿನ್ನೆಲೆ ಕರಾವಳಿ ಭಾಗದ ಎಲ್ಲ ಜಿಲ್ಲೆಗಳಲ್ಲಿ ಈಗಾಗಲೇ ಮೇ 18 ಕ್ಕೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಮೇ 17ಕ್ಕೆ ಆರೆಂಜ್ ಅಲರ್ಟ್ ಮತ್ತು ಮೇ 19 ರಿಂದ 21 ರವರೆಗೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಅದೇ ರೀತಿ ದಕ್ಷಿಣ ಒಳನಾಡು ಭಾಗದಲ್ಲೂ ಮಳೆಯಾಗುವ ಸಾಧ್ಯತೆ ಇದ್ದು, ನಾಳೆಯಿಂದ 21 ರವರೆಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.

ನಗರದ ತಾಪಮಾನ ವರದಿ:-

ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಬೆಂಗಳೂರು: 25-20
ಮಂಗಳೂರು: 28-25
ಶಿವಮೊಗ್ಗ: 26-22
ಬೆಳಗಾವಿ: 30-22
ಮೈಸೂರು: 24-20
ಮಂಡ್ಯ: 25-21
ಕೊಡಗು: 21-17
ರಾಮನಗರ: 25-21
ಹಾಸನ: 23-19
ಚಾಮರಾಜನಗರ: 25-21
ಚಿಕ್ಕಬಳ್ಳಾಪುರ: 26-20
ಕೋಲಾರ: 27-21
ತುಮಕೂರು: 24-21
ಉಡುಪಿ: 28-26
ಕಾರವಾರ: 31-27
ಚಿಕ್ಕಮಗಳೂರು: 23-19
ದಾವಣಗೆರೆ: 27-22
ಚಿತ್ರದುರ್ಗ: 26-21
ಹಾವೇರಿ: 28-23
ಬಳ್ಳಾರಿ: 31-23
ಗದಗ: 31-23
ಕೊಪ್ಪಳ: 31-23
ರಾಯಚೂರು: 34-25
ಯಾದಗಿರಿ: 34-26
ವಿಜಯಪುರ: 35-25
ಬೀದರ್: 36-25
ಕಲಬುರಗಿ: 36-27
ಬಾಗಲಕೋಟೆ: 33-24




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!