![](https://kannadavani.news/wp-content/uploads/2024/02/advertisement-contact-1024x160.jpeg)
ಕಾರವಾರ:- ಕುಡಿದು ಮನೆಗೆ ಬರುತಿದ್ದ ಗಂಡನೊಂದಿಗೆ ಮುನಿಸಿಕೊಂಡು ತವರುಮನೆ ಸೇರಿದ್ದ ಪತ್ನಿಯ ಮೇಲಿನ ಸಿಟ್ಟಿಗೆ ಹೆಂಡತಿಯ ತವರುಮನೆಗೆ ಹೋಗಿ ಅಲ್ಲಿದ್ದ ಬೈಕ್ ಗೆ ಬೆಂಕಿಹಾಕಿ ಮನೆಗೂ ಸಹ ಬೆಂಕಿಹಚ್ಚಿ ತಲೆಮರಸಿಕೊಂಡಿದ್ದ ಗಂಡ ಹಾಗೂ ಆತನ ಗೆಳೆಯನನ್ನು ಶಿರಸಿ (sirsi) ನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:-Sirsi|ದಾಯಾದಿ ವ್ಯಾಜ್ಯ, ಸರ್ವೆ ಯಲ್ಲಿ ಜಾಗ ಕಮ್ಮಿ ಬಂದಿದ್ದಕ್ಕೆ ವಿಷ ಸೇವಿಸಿದ ರೈತ ಮಹಿಳೆ
![](https://kannadavani.news/wp-content/uploads/2024/02/IMG-20240207-WA0014-770x1024.webp)
ಬಂಧಿತ ವ್ಯಕ್ತಿ ಮಣಿಕಂಠ ಹಾಗೂ ಕಸ್ತೂರಬಾ ನಗರದ ಸರ್ಫರಾಜ್ ಎಂಬುವವರಾಗಿದ್ದು ,2023 ಡಿಸೆಂಬರ್ ನಲ್ಲಿ ಮಣಿಕಂಠ ಎಂಬಾತ ತನ್ನ ಪತ್ನಿ ಮುನಿಸಿಕೊಂಡು ತವರುಮನೆ ಸೇರಿದ್ದಕ್ಕೆ ಸಿಟ್ಟಿಗೆದ್ದು ಗೆಳೆಯ ಸರ್ಫರಾಜ್ ಜೊತೆ ಸೇರಿ ಪತ್ನಿಯ ಮನೆಗೆ ತೆರಳಿದ್ದು ಮನೆಯಲ್ಲಿದ್ದ ಡಿಯೋ ಸ್ಕೂಟಿ ಮತ್ತು ಮನೆಯ ಬಿಡಿಭಾಗಗಳನ್ನು ಸುಟ್ಟು ಹಾಕಿ ಪರಾರಿಯಾಗಿದ್ದರು.
ಈ ಕುರಿತು ರಾಜಾರಾಮ್ ಕೇಣಿ ರವರು ಶಿರಸಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಠಾಣೆ ಪಿ.ಎಸ್.ಐ ನಾಗಪ್ಪ ರವರು ತಲೆಮರಸಿಕೊಂಡಿದ್ದ ಮಣಿಕಂಠನನ್ನು ಬಂಧಿಸಿದ್ದರು. ಆದರೇ ಸರ್ಫರಾಜ್ ಮಾತ್ರ ಪೊಲೀಸರ ಮಣ್ಣಿನಿಂದ ತಪ್ಪಿಸಿಕೊಂಡಿದ್ದನು.
ಇದೀಗ ಆತನನ್ನು ಸಹ ಪೊಲೀಸರು ಬಂಧಿಸಿದ್ದು ನ್ಯಾಯಾಲಯದ ಸುಪರ್ಧಿಗೆ ನೀಡಿದ್ದಾರೆ.