ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮತ್ತು ಹೊನ್ನಾವರದ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡು ( Panther )ಜನರಲ್ಲಿ ಆತಂಕ ಮೂಡಿಸಿದೆ.
ಕುಮಟಾ ತಾಲೂಕಿನ ಹೆಗಡೆ ಗ್ರಾಮದಲ್ಲಿ ಇಂದು ಚಿರತೆ (chitha) ಕಾಣಿಸಿಕೊಂಡಿದೆ. ಗ್ರಾಮದ ಜನರ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಚಿರತೆಗಾಗಿ ಹುಡುಕಾಟ ನಡೆಸಿದ್ದಾರೆ.
ಇನ್ನು ಹೊನ್ನಾವರ ಭಾಗದಲ್ಲೂ ಚಿರತೆ ಪ್ರತ್ಯಕ್ಷವಾಗಿದ್ದು ಗ್ರಾಮದಲ್ಲಿ ಉಪಟಳ ನೀಡುತ್ತಿದೆ. ಇಲ್ಲಿನ ಹಂದಿಮಲ್ಲೆ ಹತ್ತಿರ ಹಸುವೊಂದಕ್ಕೆ ಚಿರತೆ ದಾಳಿ ನಡೆಸಿ ( Chita attack )ಕೊಂದುಹಾಕಿದ್ದು ಇದೀಗ ಜನರು ಊರಿನಲ್ಲಿ ಓಡಾಡಲೂ ಭಯ ಪಡುವಂತಾಗಿದ್ದು ತಕ್ಷಣ ಉಪಟಳ ನೀಡುವ ಚಿರತೆಯನ್ನು ಹಿಡಿಯುವಂತೆ ಅರಣ್ಯ ಇಲಾಖೆಗೆ (Forest Department )ಸ್ಥಳೀಯರು ಆಗ್ರಹಿಸಿದ್ದಾರೆ.