BREAKING NEWS
Search

ಸೂರ್ಯ ಗ್ರಹಣ:ಗೋಕರ್ಣದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ನಿರ್ಬಂಧ? ಗ್ರಹಣ ಸಂದರ್ಭದಲ್ಲಿ ಏನು ಮಾಡಬೇಕು?

209

ಕಾರವಾರ :- ಮಂಗಳವಾರದಂದು ಸೂರ್ಯಗ್ರಹಣ ಇರುವುದರಿಂದ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ಬರುವ ಭಕ್ತರಿಗೆ ಆತ್ಮ ಲಿಂಗ ಸ್ಪರ್ಷ ದರ್ಶನಕ್ಕೆ ನಿರ್ಭಂಧ ವಿಧಿಸಲಾಗಿದೆ. ಈ ಕುರಿತು ಪ್ರಕಟಣೆ ಹೊರಡಿಸಿದ ಗೋಕರ್ಣ ದೇವಸ್ಥಾನ ಆಡಳಿತ ಸಮಿತಿ
ಮಹಾಬಲೇಶ್ವರ ದೇವಸ್ಥಾನ ದಲ್ಲಿ ಮಂಗಳವಾರ ಬೆಳಗ್ಗೆ ಆರು ಘಂಟೆಯಿಂದ 9-30 ರ ವರೆಗೆ ಆತ್ಮ ಲಿಂಗ ಸ್ಪರ್ಶ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದು
ನಂತರ ನಾಲ್ಕು ಘಂಟೆಯಿಂದ ಸಂಜೆ 6 ಘಂಟೆ ನಾಲ್ಕು ನಿಮಿಷದ ವರೆಗೆ ಆತ್ಮಲಿಂಗ ಸ್ಪರ್ಷ ದರ್ಶನಕ್ಲೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದೆ.
ಕ್ಲಿಕ್ ಮಾಡಿ ಇದನ್ನೂ ಓದಿ:-ಇಂದಿನ ದಿನ ಭವಿಷ್ಯ ಯಾವ ರಾಶಿಗೆ ಏನು ಫಲ?

ದೀಪಾವಳಿ ಅಮವಾಸೆಯಲ್ಲೇ ಸೂರ್ಯಗ್ರಹಣ:ಮಾಡುವ ವಿಧಾನ ಏನು?

ದೀಪಾವಳಿ ಹೊತ್ತಲ್ಲೇ 27 ವರ್ಷಗಳ ಬಳಿಕ ಕೇತುಗ್ರಸ್ತ ಸೂರ್ಯಗ್ರಹಣ (Solar Eclipse) ಸಂಭವಿಸಲಿದೆ. ಈ ವರ್ಷದ ಕೊನೆಯ ಸೂರ್ಯ ಗ್ರಹಣ ಅ.25ರಂದು ಸಂಭವಿಸಲಿದ್ದು, ಇಡೀ ಜಗತ್ತೇ ಅತ್ಯಂತ ಕುತೂಹಲದಿಂದ ಕೌತುಕವನ್ನ ಕಣ್ತುಂಬಿಕೊಳ್ಳಲು ಎದುರು ನೋಡ್ತಿದೆ.

ಇನ್ನು ದೀಪಾವಳಿ ಅಮವಾಸ್ಯೆ ದಿನದಂದೇ ಸೂರ್ಯಗ್ರಹಣ ಸಂಭವಿಸಿರುವುದರಿಂದ ಪೂಜೆ-ಪುನಸ್ಕಾರಗಳಿಗೆ ಬಗ್ಗೆ ಚರ್ಚೆಗಳು ನಡೆದಿವೆ. ಇನ್ನು ಕೆಲವರು ಜೋತಿಷ್ಯರ ಮೊರೆ ಹೋಗಿದ್ದಾರೆ. ಹಾಗಾದ್ರೆ, ಲಕ್ಷ್ಮೀ ಪೂಜೆಯನ್ನು ಯಾವ ಮಾಡಬೇಕು? ಹೇಗೇ ಮಾಡ್ಬೇಕು? ಎನ್ನುವ ಮಾಹಿತಿ ಈ ಕೆಳಗಿನಂತಿದೆ.

ಸೂರ್ಯ ಗ್ರಹಣ ಸಮಯ.

  • ಗ್ರಹಣ ಸ್ಪರ್ಶಕಾಲ – ಮಧ್ಯಾಹ್ನ 2:15
  • ಗ್ರಹಣ ಮಧ್ಯಕಾಲ – ಮಧ್ಯಾಹ್ನ 4:18
  • ಗ್ರಹಣ ಮೋಕ್ಷಕಾಲ – ಸಂಜೆ 6:30

ದೀಪಾವಳಿ ಅಮಾವಾಸ್ಯೆಯಂದು ಮಧ್ಯಾಹ್ನ 2:15 ಕ್ಕೆ ಆರಂಭವಾಗುವ ಸೂರ್ಯಗ್ರಹಣ, 4 ಗಂಟೆ 18 ನಿಮಿಷಕ್ಕೆ ಬಹಳಷ್ಟು ತೀವ್ರತೆಯನ್ನ ಪಡೆದುಕೊಳ್ಳುತ್ತೆ . ಸಂಜೆ 6.30ಕ್ಕೆ ಗ್ರಹಣವು ಮುಕ್ತಾಯವಾಗುತ್ತೆ.

ಗ್ರಹಣ. ಮತ್ತು ದೀಪಾವಳಿ ಹಬ್ಬ ಅಚರಣೆ.

ಗ್ರಹಣವು ಕರ್ನಾಟಕ ಮತ್ತು ಭಾರತ ದೇಶಕ್ಕೆ ಕಾಣಿಸುವುದರಿಂದ ಗ್ರಹಣಾಚರಣೆ ಇರುತ್ತದೆ. ಗ್ರಹಣದ ಮೋಕ್ಷವು ಸೂರ್ಯಾಸ್ತದ ನಂತರ ಅಗುವುದರಿಂದ ಗ್ರಹಣದ ಮೋಕ್ಷವು ಕಾಣಿಸುವುದಿಲ್ಲ.

ಭೋಜನ ವಿಚಾರ

ಬಾಲಕರು, ವೃದ್ಧರು, ರೋಗಿಗಳು,ಅಶಕ್ತರು,ಗರ್ಭಿಣಿಯರು, ಬಾಣಂತಿಯರು ದಿನಾಂಕ 25-10-2022 ಮಂಗಳವಾರ ಹಗಲು 12:00 ಘಂಟೆಯವರೆಗೆ ಆಹಾರ ಸೇವಿಸಬಹುದು. ಗ್ರಹಣಾಚರಣೆ ಮಾಡುವ ಎಲ್ಲರೂ ಗ್ರಹಣ ಸ್ಪರ್ಶ ಕಾಲದಲ್ಲೂ ಹಾಗೂ ಮೋಕ್ಷವಾದ ನಂತರ ಉಟ್ಟ ಬಟ್ಟೆಯಲ್ಲಿ ಸ್ನಾನ ಮಾಡಬೇಕು.

ತರ್ಪಣ ವಿಚಾರ.

ದಿನಾಂಕ:- 25-10-2022 ಮಂಗಳವಾರದಂದು ಗ್ರಹಣ ಸ್ಪರ್ಶ ಕಾಲದಿಂದ ಗ್ರಹಣದ ಮಧ್ಯ ಕಾಲದ ವರೆಗು ತರ್ಪಣಾದಿಗಳನ್ನ ನಡೆಸ ಬಹುದು.
ದಿನಾಂಕ :- 24-10-2022 ಸೋಮವಾರ ನರಕ ಚರ್ತುದಶಿ ಆಚರಣೆ ಮಡಲು ಬರುವುದಿಲ್ಲ. ನರಕ ಚರ್ತುದಶಿ ಆಚರಣೆ ಮಾಡುವವರು ದಿನಾಂಕ 25-10-2022 ಮಂಗಳವಾರ ಗ್ರಹಣ ಮುಗಿದ ನಂತರ ಸಂಜೆ 6:45 ರ ನಂತರ ಆಚರಿಸತಕ್ಕದ್ದು. ಅಮಾವಾಸ್ಯೆ ಯಲ್ಲಿ ಲಕ್ಷ್ಮೀ ಪೂಜೆಯನ್ನ ಮಾಡುವವರು ಸಹ 25 ನೇ ತಾರೀಖಿನಂದು ಸಂಜೆ 6:45 ರ ನಂತರ ಮಾಡತಕ್ಕದ್ದು.

ರಾಹುಕಾಲ 12:07 P.M. ರಿಂದ 1:35 P.M ವರೆಗೆ ಯಮಗಂಡ ಕಾಲ 7:43 A.M ರಿಂದ 9:11 A.M ವರೆಗೆ
ಗೋವುಗಳು ಸಂಜೆ ಮನೆಗೆ ಬರುವ ಸಮಯ ಸಂಜೆ (ಕೊಟ್ಟಿಗೆ ಅಥವಾ ಹಟ್ಟಿಗೆ ) 5:30P.M ರಿಂದ 7:00 P.M ವರೆಗೆ ಶುಭಸಮಯ ಇರುತ್ತದೆ.

ಗ್ರಹಣ ಶಾಂತಿ ವಿಚಾರ:- ಚಿತ್ತ,ಸ್ವಾತಿ,ನಕ್ಷತ್ರ ಮತ್ತು ಕನ್ಯಾ,ತುಲಾ,ಮೇಷ,ಮೀನ,ಸಿಂಹ, ರಾಶಿಯವರಿಗೆ ಗ್ರಸ್ತಾಸ್ತ ಕೇತುಗ್ರಸ್ತ ಸೂರ್ಯಗ್ರಹಣ ದೋಷಕಾರಿ ಯಾಗುತ್ತದೆ.

ಈ ದೋಷ ಪರಿಹಾರಕ್ಕೆ ಹೆಸರುಕಾಳು, ಅವರೆಕಾಳು.ಗೋದಿ. ತೊಗರಿಕಾಳು. ಧಾನ್ಯಗಳ ಮೇಲೆ ನಿಮ್ಮ ಕೈಲಾದಷ್ಟು ದಕ್ಷಿಣೆಯನ್ನುಇಟ್ಟು ಕೆಳಗೆ ಕೊಟ್ಟಿರುವ ಈ ಶ್ಲೋಕಗಳನ್ನು ಹೇಳಿಕೊಂಡು ಒಂದು ಕಾಗದದ ಮೇಲೆ ಬರೆದು ಧಾನ್ಯದ ಮೇಲೆ ಇಟ್ಟು ಪೂಜಿಸಿ ಬ್ರಾಹ್ಮಣ ಯತಿಗಳಿಗೆ ಅಥವಾ ಹತ್ತಿರವಿರುವ ದೇವಾಲಯಗಳ ಅರ್ಚಕರಿಗೆ ಕೊಡುವುದರಿಂದ ದೋಷ ಪರಿಹಾರ ಆಗುತ್ತದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!