ಕಾರವಾರ :- ಹಿಂದೂ ದೇವರ ಅವಹೇಳನ ಮಾಡಿದ ದಲಿತ ಮುಖಂಡನ ಚಿತ್ರೀಕರಣ ಮಾಡಿ ದೂರು ನೀಡುವ ಮೂಲಕ ಬಂಧಿಸಲು ಕಾರಣವಾಗಿದ್ದ ಯುವಕನ ಮೇಲೆ ದಲಿತ ಮುಖಂಡನ ಕುಟುಂಬ( family ) ಹಲ್ಲೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಂಗಾರಪ್ಪ ನಗರದಲ್ಲಿ ನಡೆದಿದೆ.
ಮಾರುತಿ ವಾಲ್ಮೀಕಿ ಹಲ್ಲೆಗೊಳಗಾದ ಯುವಕ ನಾಗಿದ್ದು ,ಕಳೆದ ತಿಂಗಳು ದಲಿತ ರಕ್ಷಣಾ ವೇದಿಕೆ ಅಧ್ಯಕ್ಷ ಎಲಿಷಾ ಎಲಕಪಾಟಿ ಹಿಂದೂ ದೇವರ( Hindu god ) ಮೇಲೆ ಅವಹೇಳನಕಾರಿಯಾಗಿ ಮಾತನಾಡಿ ಮಾರುತಿ ವಾಲ್ಮೀಕಿ ದೂರಿನ ಮೇಲೆ ಬಂಧನಕ್ಕೊಳಗಾಗಿದ್ದರು.(arrest) ಇಂದು ರಾತ್ರಿ ಕ್ಷುಲ್ಲಕ್ಕ ಕಾರಣ ದಿಂದ ಜಗಳ ತೆಗೆದ ದಲಿತ ಮುಖಂಡ ಎಲಿಷಾ ಎಲಿಕಪಾಟಿ ಕುಟುಂಬದವರು ಮಾರುತಿ ವಾಲ್ಮೀಕಿಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಈ ಕುರಿತು ಮಾರುತಿ ವಾಲ್ಮೀಕಿ ಹೇಳಿಕೆ ನೀಡಿದ್ದಾರೆ
ಇದನ್ನೂ ಓದಿ:- ದಲಿತ ಮುಖಂಡನಿಂದ ಹಿಂದೂ ದೇವರ ಅವಹೇಳನ ವಿಡಿಯೋ ವೈರಲ್ (ಅಕ್ಷರದ ಮೇಲೆ ಕ್ಲಿಕ್ ಮಾಡಿ)
ಹಲ್ಲೆಗೊಳಗಾದ ಮಾರುತಿ ವಾಲ್ಮೀಕಿ ಚಿಕ್ಕಪುಟ್ಟ ಗಾಯವಾಗಿದ್ದು ಕಾರವಾರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.