ಕಾರವಾರ :- ಕಾರ್ಯ ನಿಮಿತ್ತ ಯಲ್ಲಾಪುರಕ್ಕೆ ತೆರಳುತಿದ್ದ ಕಾರವಾರದ ಡಿ.ವೈ.ಎಸ್.ಪಿ ಅರವಿಂದ್ ಕಲಗುಜ್ಜಿ ರವರ ಸರ್ಕಾರಿ ವಾಹನಕ್ಕೆ ಎದುರಿನಿಂದ ಬಂದ ಓಮಿನಿ ಡಿಕ್ಕಿ ಹೊಡೆದು ಅಪಘಾತವಾದ ಘಟನೆ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೀರಗದ್ದೆ ಗಣಪತಿ ದೇವಸ್ಥಾನದ ಬಳಿ ಇಂದು ನಡೆದಿದೆ.
![](https://kannadavani.news/wp-content/uploads/2021/03/TextMaster_03-08-08.15.57-1024x716.jpeg)
ಅಪಘಾತದಲ್ಲಿ ಡಿ.ವೈ. ಎಸ್.ಪಿ ಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ವಾಹನದಲ್ಲಿದ್ದ ಅಂಕೊಲ ಮೂಲದ ಇಬ್ಬರು ಮಕ್ಕಳಿಗೆ ಗಾಯಗಳಾಗಿದ್ದು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.