BREAKING NEWS
Search

ಆಟೋ ರಿಕ್ಷ ಚಾಲಕರ ಗಮನಕ್ಕೆ:ನಾಳೆ ಕಾರವಾರ ಆಟೋರಿಕ್ಷ ಚಾಲಕ,ಮಾಲೀಕರಿಗೆ ಔತನಕೂಟ ,ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮ. ವಿವರ ನೋಡಿ.

92

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬ್ಯಾಗದ್ದೆ ಮೂಲದ ಅನಂತಮೂರ್ತಿ ಹೆಗಡೆರವರು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಮೂಲಕ
ಆಟೋರಿಕ್ಷ ಮತ್ತು ಗೂಡ್ಸ್ ರಿಕ್ಷಾ ಚಾಲಕ ,ಮಾಲೀಕರಿಗೆ ಔತನಕೂಟ , ಉಚಿತ ಸಮವಸ್ತ್ರ ವಿತರಿಸುವ ಜೊತೆಗೆ ಆಟೋರಿಕ್ಷ ಪಾಸಿಂಗ್ ಯೋಜನೆ ಹಾಗೂ ಆಟೋರಿಕ್ಷ ಪ್ರಿಂಟಿಂಗ್ ಹುಡ್ ವಿತರಣಾ ಕಾರ್ಯಕ್ರಮವನ್ನು ಕಾರವಾರದಲ್ಲಿ ಉಚಿತವಾಗಿ ಹಮ್ಮಿಕೊಂಡಿದ್ದಾರೆ.

ನಾಳೆ ಬೆಳಗ್ಗೆ 26-10-2023 ರ ಗುರುವಾರ 10-30 ಕ್ಕೆ ನಗರದ ಅಜ್ವೆ ಓಷನ್ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು ಆಟೋ ರಿಕ್ಷ ಚಾಲಕ,ಮಾಲೀಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಾಮಾಜಿಕ ಕಾರ್ಯಕರ್ತ ,ಮುಖಂಡ ಅನಂತಮೂರ್ತಿ ಹೆಗಡೆಯವರು ಕೋರಿಕೊಂಡಿದ್ದಾರೆ.ಈ ಕಾರ್ಯಕ್ರಮವನ್ನು ಕಾರವಾರದ ಶಾಸಕ ಸತೀಶ್ ಸೈಲ್ ಉದ್ಘಾಟನೆ ನೆರವೇರಿಸಲಿದ್ದು ,MLC ಗಣಪತಿ ಉಳ್ವೇಕರ್, ಮಾಜಿ ಶಾಸಕಿ ರೂಪಾಲಿ ನಾಯ್ಕ, ಜಾರ್ಜ ಫರ್ನಾಂಡಿಸ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಶಿರಸಿಯ ಅನಂತಮೂರ್ತಿ ಹೆಗಡೆಯವರು ಅನೇಕ ಸಾಮಾಜಿಕ ಕಾರ್ಯ ನಡೆಸಿಕೊಂಡು ಬರುತಿದ್ದು ಆಟೋ ಚಾಲಕ ಮಾಲೀಕರಿಗಾಗಿ ಅವರ ಸಹಾಯಕ್ಕಾಗಿ ಜಿಲ್ಲೆಯ ಶಿರಸಿ,ಹೊನ್ನಾವರ,ಭಟ್ಕಳ,ಕುಮಟಾ,ಯಲ್ಲಾಪುರ,ಮುಂಡಗೋಡು, ಬೆಳಗಾವಿ ಜಿಲ್ಲೆಯ ಕಿತ್ತೂರು ಭಾಗದಲ್ಲಿ
ಆಟೋರಿಕ್ಷ ಮತ್ತು ಗೂಡ್ಸ್ ರಿಕ್ಷಾ ಚಾಲಕ ,ಮಾಲೀಕರಿಗೆ ಔತನಕೂಟ , ಉಚಿತ ಸಮವಸ್ತ್ರ ವಿತರಿಸುವ ಜೊತೆಗೆ ಆಟೋರಿಕ್ಷ ಪಾಸಿಂಗ್ ಯೋಜನೆ ಹಾಗೂ ಆಟೋರಿಕ್ಷ ಪ್ರಿಂಟಿಂಗ್ ಹುಡ್ ವಿತರಣಾ ಕಾರ್ಯಕ್ರಮವನ್ನು ನೆರವೇರಿಸಿದ್ದು ,ಸಾವಿರಾರು ಜನ ಭಾಗಿಯಾಗಿ ಇದರ ಉಪಯೋಗ ಪಡೆದುಕೊಂಡಿದ್ದಾರೆ.

ಇದೀಗ ಕಾರವಾರದಲ್ಲಿ ಮುಂದುವರೆದ ಭಾಗವಾಗಿ ಈ ಕಾರ್ಯ ನೆರವೇರಿಸಲಾಗುತಿದ್ದು ಆಟೋ ಚಾಲಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳುವಂತೆ ಅನಂತಮೂರ್ತಿ ಹೆಗೆಡೆ ಅಭಿಮಾನಿ ಬಳಗ ಕೇಳಿಕೊಂಡಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!