Karwar:- ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ಹಂಚಲಾಗಿದೆ.
ಹಾಗಿದ್ರೆ ಯಾವ ಅಭ್ಯರ್ಥಿಗೆ ಯಾವ ಚಿಹ್ನೆ ನೀಡಲಾಗಿದೆ ಅದರ ವಿವರ ಇಲ್ಲಿದೆ.
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಪಕ್ಷದ ಚಿಹ್ನೆಯಾದ ಕೈ ಗುರುತು, ಭಾರತೀಯ ಜನತಾ ಪಾರ್ಟಿಯ ಕಾಗೇರಿ ವಿಶ್ವೇಶ್ವರ ಹೆಗಡೆ ಅವರಿಗೆ ಪಕ್ಷದ ಚಿಹ್ನೆಯಾದ ಕಮಲದ ಗುರುತು, ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್) ಪಕ್ಷದ ಗಣಪತಿ ಹೆಗಡೆಗ ಬ್ಯಾಟ್, ಉತ್ತಮ ಪ್ರಜಾಕೀಯ ಪಕ್ಷದ ಸುನೀಲ್ ಪವಾರ್ ಗೆ ಆಟೋ ರಿಕ್ಷಾ, ಕರ್ನಾಟಕ ರಾಷ್ಟ್ರೀಯ ಸಮಿತಿಯ ವಿನಾಯಕ ನಾಯ್ಕ್ ಗೆ ಬ್ಯಾಟರಿ ಟಾರ್ಚ್.
ಇದನ್ನೂ ಓದಿ:- ಶಿರಸಿಗೆ ಮೋದಿ| ಎಲ್ಲಿ ಕಾರ್ಯಕ್ರಮ ವಿವರ ನೋಡಿ
ಪಕ್ಷೇತರ ಅಭ್ಯರ್ಥಿಗಳಾದ ಅರವಿಂದ ಗೌಡ ಗೆ Table (ಮೇಜು), ಅವಿನಾಶ್ ನಾರಾಯಣ ಪಾಟೀಲ್ ಗೆ ಹಡಗು, ಕೃಷ್ಣ ಹನುಮಂತಪ್ಪ ಬಳೆಗಾರ ಗೆ ಪ್ರಶರ್ ಕುಕ್ಕರ್, ಚಿದಾನಂದ ಹನುಮಂತಪ್ಪ ಹರಿಜನ ಗೆ ಕಲ್ಲಂಗಡಿ ಹಣ್ಣು, ನಾಗರಾಜ ಅನಂತ ಶಿರಾಲಿ ಗೆ ವಜ್ರ, ನಿರಂಜನ್ ಉದಯಸಿನ್ಹಾ ಸರ್ದೇಸಾಯಿ ಗೆ ಮಡಿಕೆ, ಕೃಷ್ಣಾಜಿ ಪಾಟೀಲ್ ಗೆ ಟ್ರಕ್, ರಾಜಶೇಖರ ಶಂಕರ ಹಿಂಡಲಗಿ ಗೆ ಡೀಸೆಲ್ ಪಂಪ್ ಚಿಹ್ನೆಗಳನ್ನು ಹಂಚಿಕೆ ಮಾಡಲಾಗಿದೆ.