Lokayukta ride|ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಉನ್ನತ ಅಧಿಕಾರಿಗಳ ಮನೆಯ ಮೇಲೆ ಲೋಕಾಯುಕ್ತ ದಾಳಿ.

192

ಕಾರವಾರ:- ಭ್ರಷ್ಟರನ್ನು ಬೆನ್ನಟ್ಟುವ ಲೋಕಾಯುಕ್ತ ಇದೀಗ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಇಬ್ಬರು ಉನ್ನತ ಮಟ್ಟದ ಅಧಿಕಾರಿಗಳ ಮೇಲೆ ದಾಳಿ ನಡೆಸಿದೆ.

ಭ್ರಷ್ಟಾಚಾರದ ಆರೋಪದ ಹಿನ್ನೆಲೆ ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ ಎಇಇ ಆಗಿರುವ ಪ್ರಕಾಶ್ ಆರ್. ರೇವಣಕರ್ ಅವರ ಮನೆ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕಾರವಾರದಲ್ಲಿ ಐಶ್ವರ್ಯ ರೆಸಿಡೆನ್ಸಿಯಲ್ಲಿರುವ ಪ್ರಕಾಶ್ ರೇವಣ್ಕರ್‌ ಮನೆಗೆ ಹಾಗೂ ಕಚೇರಿಗೆ ದಾಳಿ ನಡೆಸಿದ ಅಧಿಕಾರಿಗಳು ಪೂರ್ಣ ಜಾಲಾಡಿ ಅಕ್ರಮ ಆಸ್ತಿ ಹಾಗೂ ದಾಖಲೆಗಳ ಹುಡುಕಾಟ ಮುಂದುವರಿಸಿದ್ದಾರೆ.

ಇದರ ಜತೆ ಅಬಕಾರಿ ಡಿಸಿ ಎಂ. ರೂಪಾ ಅವರ ಮೇಲೆಯೂ ಲೋಕಾಯುಕ್ತ ಎಸ್ಪಿ ಕುಮಾರ್ ಚಂದ್ರ ನೇತೃತ್ವದಲ್ಲಿ ದಾಳಿ ನಡೆದಿದೆ.
ರೂಪಾ ಅವರಿಗೆ ಸಂಬಂಧಿಸಿದ
ಬೆಂಗಳೂರಿನ ಎರಡು ಮನೆ, ಶಿವಮೊಗ್ಗ ಹೊಸನಗರದ ಫಾರ್ಮ್ ಹೌಸ್, ಕಾರವಾರದ ಮನೆ ಹಾಗೂ ಕಾರವಾರದ ಕಚೇರಿಗೆ ದಾಳಿ ನಡೆಸಿ ದಾಖಲೆಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ದಾಳಿ ವೇಳೆ ಅಬಕಾರಿ ಡಿಸಿ ಎಂ.‌ರೂಪಾ ಅನುಪಸ್ಥಿತರಾಗಿದ್ದರು ಎಂದು ಹೇಳಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!