Rain|ಮಳೆ ಅಬ್ಬರ -6 ಸೇತುವೆಗಳು ಮುಳುಗಡೆ

ಚಿಕ್ಕೋಡಿಯಲ್ಲಿ ಭಾರಿ ಮಳೆಯಿಂದ ಕೃಷ್ಣಾ, ದೂದಗಂಗಾ, ವೇದಗಂಗಾ ನದಿಗಳ ನೀರಿನ ಮಟ್ಟ ಏರಿಕೆಯಾಗಿ 6 ಸೇತುವೆಗಳು ಮುಳುಗಡೆಯಾಗಿವೆ. ಜನರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುತ್ತಿದ್ದಾರೆ.
ಚಿಕ್ಕೋಡಿಯಲ್ಲಿ ಭಾರಿ ಮಳೆಯಿಂದ ಕೃಷ್ಣಾ ಹಾಗೂ ದೂದಗಂಗಾ ನದಿಗಳ ನೀರಿನ ಮಟ್ಟ ಏರಿಕೆಯಾಗಿ ಜಲಾವೃತಗೊಂಡ ಸೇತುವೆಯ ದೃಶ್ಯ. ಚಿಕ್ಕೋಡಿಯಲ್ಲಿ ಭಾರಿ ಮಳೆಯಿಂದ ಕೃಷ್ಣಾ ಹಾಗೂ ದೂದಗಂಗಾ ನದಿಗಳ ನೀರಿನ ಮಟ್ಟ ಏರಿಕೆಯಾಗಿ ಜಲಾವೃತಗೊಂಡ ಸೇತುವೆಯ ದೃಶ್ಯ.
ಚಿಕ್ಕೋಡಿ ಸೇತುವೆ ಮುಳುಗಡೆ ದೃಶ್ಯ

Rain|ಮಳೆ ಅಬ್ಬರ -6 ಸೇತುವೆಗಳು ಮುಳುಗಡೆ.

ಚಿಕ್ಕೋಡಿ: ಅಬ್ಬರದ ಮಳೆ (Rain) ಮತ್ತೆ ಪ್ರಾರಂಭವಾಗಿದ್ದು ಕೃಷ್ಣಾ ನದಿ ಒಳಹರಿವಿನಲ್ಲಿ ಮತ್ತೆ   ಏರಿಕೆಯಾಗಿದೆ.

 ಮಹಾರಾಷ್ಟ್ರದಿಂದ ರಾಜ್ಯಕ್ಕೆ ಒಟ್ಟು 65 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ  ಕೃಷ್ಣಾ, ದೂದಗಂಗಾ ವೇದಗಂಗಾ, ಹೀರಣ್ಯಕೇಶಿ ನದಿಗಳು ಮೈದುಂಬಿ ಹರಿಯುತ್ತಿವೆ.

ಇದನ್ನೂ ಓದಿ:-Karwar|ಮಾಲ್ವಾಣ್ ಯುದ್ಧ ನೌಕೆ ಕದಂಬ ನೌಕಾನೆಯಿಂದ ಜು.22ರಿಂದ ಕಾರ್ಯಾರಂಭ-ಅದರ ವಿಶೇಷ ಇಲ್ಲಿದೆ.

Advertisement

ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾದ ಕಾರಣ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಲ್ಲಿ ಎರಡನೇ ಬಾರಿಗೆ 6 ಸೇತುವೆಗಳ ಮುಳುಗಡೆಯಾಗಿವೆ. ನಿಪ್ಪಾಣಿ ತಾಲೂಕಿನ 5 ಚಿಕ್ಕೋಡಿ ತಾಲೂಕಿನ 1 ಸೇತುವೆ ಮುಳುಗಡೆಯಾಗಿವೆ.

Chikkodi rain news
ಮುಳುಗಿದ ಸೇತುವೆ ಚಿತ್ರ

ಕೃಷ್ಣಾ ನದಿಗೆ ಅಡ್ಡಲಾಗಿರುವ ಚಿಕ್ಕೋಡಿ ತಾಲೂಕಿನ ಕಲ್ಲೋಳ ಯಡುವ ಬ್ರಿಡ್ಜ್ ಕಂ ಬ್ಯಾರೇಜ್ ಮುಳುಗಡೆಯಾದರೇ  ನಿಪ್ಪಾಣಿ ತಾಲೂಕಿನ ದೂದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಾರದಗಾ-ಬೋಜ್ ಸಂಪರ್ಕಿಸುವ ಸೇತುವೆ ಜಲಾವೃತ ಹಾಗೂ  ವೇದಗಂಗಾ ನದಿಗೆ ಅಡ್ಡಲಾಗಿರುವ ಬೋಜ – ಕಾರದಗಾ, ಭೋಜವಾಡಿ – ಕುನ್ನೂರು, ಅಕ್ಕೋಳ-ಸಿದ್ನಾಳ,ಹುನ್ನರಗಿ, ಮಮದಾಪೂರ, ಭಾರವಾಡಿ ಕುನ್ನೂರು ಸೇತುವೆಗಳು ಜಲಾವೃತವಾಗಿವೆ. ಸೇತುವೆಗಳು ಜಲಾವೃತ ಹಿನ್ನೆಲೆ ಪರ್ಯಾಯ ಮಾರ್ಗಗಳ‌ ಮೂಲಕ ಜನರ ಸಂಚಾರ ನಡೆಸುತ್ತಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement