ಯಡಜಿಗಳೆಮನೆ:ಪ್ರಗತಿಪರ ಕೃಷಿಕ ಮಂಜಣ್ಣನಿಗೆ ಸಂದ ಜಯ!

497

ಶಿವಮೊಗ್ಗ :- ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಯಡಜಿಗಳೇಮನೆ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಹಕ್ರೆ ವಾರ್ಡ ನಿಂದ ಸಾಮಾನ್ಯ ಕ್ಷೇತ್ರ ದಲ್ಲಿ ನಿಂತಿದ್ದ ಮಂಜುನಾಥ್ .ಹೆಚ್.ಜಿ ರವರು 129 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.

ಹಕ್ರೆ ಮತಗಟ್ಟೆಯಲ್ಲಿ 513 ಮತದಾರರಿದ್ದು 441 ಮತಗಳು ಚಲಾವಣೆ ಗೊಂಡಿತ್ತು.

ಮಂಜುನಾಥ್.ಹೆಚ್.ಜಿ ಹಕ್ರೆ ರವರು ಒಟ್ಟು 237 ಮತಗಳನ್ನು ಪಡೆದಿದ್ದು ಹಿಂದಿನ ಗ್ರಾಮಪಂಚಾಯ್ತಿ ಸದಸ್ಯ ಸತೀಶ್ ತೋಟದಕೊಪ್ಪ ರವರನ್ನು 129 ಮತಗಳಿಂದ ಪರಾಭವ ಗೊಳಿಸಿದ್ದಾರೆ.

ಹಕ್ರೆ ಗ್ರಾ.ಪಂ ಸಾಮಾನ್ಯ ವರ್ಗ ದಿಂದ ಸತೀಶ್ ತೋಟದಕೊಪ್ಪ -108 ಮತಗಳು, ಮಂಜುನಾಥ್ .ಕೆ.- 97 ಮತಗಳು,ದೇವೇಂದ್ರ ಬಿಳಿಗಲ್ಲಿ -56 ಮತಗಳು ,ಗೋಪಾಲ ಹಕ್ರೆ-44 ಮತಗಳನ್ನು ಪಡೆದಿದ್ದಾರೆ.

ಮಂಜುನಾಥ್ .ಹೆಚ್ .ಜಿ ರವರು ಮೂಲತಹಾ ಪ್ರಗತಿಪರ ಕೃಷಿಕರಾಗಿದ್ದು ಭೂಮಿಯನ್ನು ನಂಬಿ ಬದುಕು ಕಟ್ಟಿಕೊಂಡವರು.ಹಕ್ರೆ ಭಾಗದಲ್ಲಿ ಕೃಷಿ ಚಟುವಟಿಕೆ ಮೂಲಕವೇ ಗುರುತಿಸಿಕೊಂಡಿರುವ ಇವರು ಮಂಜಣ್ಣ ಎಂದೇ ಸ್ಥಳೀಯವಾಗಿ ಚಿರಪರಿಚಿತರಾಗಿದ್ದಾರೆ. ಸದಾ ಚಟುವಟಿಕೆ ಮೂಲಕ ತಮ್ಮ ಕೃಷಿ ಕಾಯಕದ ಜೊತೆ ಸಾಮಾಜಿಕ ಸೇವೆ ಮೂಲಕ ಗ್ರಾಮದ ಜನರ ಪ್ರೀತಿ ಪಾತ್ರರಾಗಿದ್ದು ಈ ಬಾರಿಯ ಗ್ರಾ‌ಪಂ ಚುನಾವಣೆಯಲ್ಲಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!