ಕಾರವಾರ:- ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿ 14 ಜನ ಮೀನುಗಾರರ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಭಾಗದ ಆಳ ಸಮುದ್ರದಲ್ಲಿ ನಡೆದಿದೆ.
ಎರಡು ದಿನದ ಹಿಂದೆ ಹೊನ್ನಾವರದ ಕಾಸರಕೋಡಿನಿಂದ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಎಮ್ .ಎಸ್.ಅಂಗಳೂರು ಎಂಬ ಹೆಸರಿನ ಮೀನುಗಾರಿಕೆ ಬೋಟ್ ತಳಭಾಗದಲ್ಲಿ ಒಡೆದುಹೋಗಿ ಬೋಟ್ ಗೆ ನೀರು ತುಂಬಿತ್ತು. ಈ ವೇಳೆ ಅಲ್ಲಿಯೇ ಮೀನುಗಾರಿಕೆ ಮಾಡುತಿದ್ದ ಅನಸೂಯ ಎಂಬ ಹೆಸರಿನ ಬೋಟ್ ನಿಂದ 14 ಜನ ಮೀನುಗಾರರ ರಕ್ಷಣೆ ಮಾಡಿ ಹೊನ್ನಾವರದ ಕಾಸರಕೋಡ ಬಂದರಿಗೆ ರಕ್ಷಿತ ಮೀನುಗಾರರನ್ನು ಕರೆತರಲಾಗಿದೆ.