ಕಾರವಾರ :- ಅಕ್ರಮವಾಗಿ ಸಾಗಿಸುತಿದ್ದ 80ಸಾವಿರ ಮೌಲ್ಯದ 400 ಕೆಜಿ ಗೋಮಾಂಸ ವನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಶಿರಾಲಿಯಲ್ಲಿ ವಾಹನ ಸಮೇತ ಪೊಲೀಸರು ವಶಕ್ಕೆ ಪಡೆದಿದ್ದು ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಆದರೇ ಮೂರು ಜನ ಆರೋಪಿಗಳು ಕಾರ್ಯಾಚರಣೆ ವೇಳೆ ಪರಾರಿಯಾಗಿದ್ದಾರೆ.
ಸೈಯ್ಯದ್ ಮೋಹಿದೀನ್ ಅಲಿ ಬಂಧಿತ ಆರೋಪಿಯಾಗಿದ್ದು ,ಗಜಬರ್ ಅಲಿಯಾಸ್ ಸಮೀರ್,ಇಬ್ರಾಹಿಂ ಮುಹಮ್ಮದ್ ಹುಸೇನ್,ನಾಸೀರ್ ಪರಾರಿಯಾದವರಾಗಿದ್ದು
ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಸಿ.ಪಿ.ಐ
ಮಹಾಬಲೇಶ್ವರ .ಎಸ್. ನಾಯ್ಕ ಮಾರ್ಗದರ್ಶನದಲ್ಲಿ
ಗ್ರಾಮಿಣ ಠಾಣೆಯ ಪಿ.ಎಸ್.ಐ ರತ್ನಾ ಎಸ್, ಕುರಿ, ಸಿಬ್ಬಂದಿಗಳಾದ ದೀಪಕ. ಎಸ್. ನಾಯ್ಕ ರಾಜು ಗೌಡ,ಮಹೇಶ ಪಟಗಾರ, ಶಿವಶರಣಪ್ಪ ಸಿನ್ನೂರ ಭಾಗವಹಿಸಿದ್ದರು.