ಕಾರವಾರ :- ಗ್ಯಾರಂಟಿ ಯೋಜನೆ ( guarantee scheme) ಅನುಷ್ಠಾನದಿಂದ ಬಿಜೆಪಿ, ಜೆಡಿಎಸ್ಗೆ ಹೊಟ್ಟೆಉರಿ, ಹೀಗಾಗಿ ಗ್ಯಾರಂಟಿ ಬಗ್ಗೆ ಅವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು
ಮುಂಡಗೋಡಿನಲ್ಲಿ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಹೇಳಿದರು.
ಶಕ್ತಿ ಕಾರ್ಯಕ್ರಮದಲ್ಲಿ ಮಹಿಳೆಯರು ಹೆಚ್ಚಾಗಿ ಪ್ರಯಾಣಿಸುತ್ತಿದ್ದಾರೆ, 1ಕೋಟಿ 17ಲಕ್ಷ ಮಹಿಳೆಯರಿಗೆ ತಿಂಗಳಿಗೆ 2೦೦೦ ರು. ಖಾತೆಗೆ ಜಮಾ ಆಗುತ್ತಿದೆ.
ಇದನ್ನೂ ಓದಿ:-Bhatkal|ಸಂಸದ ಹೆಗಡೆ ಸೇರಿ 21 ಜನರ ಮೇಲೆ ಪ್ರಕರಣ ದಾಖಲು ಕಾರಣ ಏನು?
ಪಡಿತರ ಕಾರ್ಡ್ ಲಿಸ್ಟ್ನಲ್ಲಿರುವರುವ ಪ್ರತಿಯೊಬ್ಬರಿಗೆ 122 ರೂ ನಂತೆ ಹಣ ನೀಡುತ್ತಿದ್ದೇವೆ ಎಂದರು.
ಬಿಜೆಪಿಗೆ 400 ಸ್ಥಾನ ಬಂದರೆ ಸಂವಿಧಾನ ಬದಲಾವಣೆ ಬಗ್ಗೆ ಸಂಸದ ಅನಂತಕುಮಾರ ಹೇಳಿದ್ದಾರೆ, ಕೇಂದ್ರ ಮಂತ್ರಿಯಾಗಿದ್ದಾಗ ಅನಂತ ಸಕ್ರಿಯವಾಗಿ ಓಡಾಡುತ್ತಿದ್ದರು ,ಸಚಿವ ಸ್ಥಾನ ಕಸಿದುಕೊಂಡರೆಂದು ಐದು ವರ್ಷದಿಂದ ಎಲ್ಲಿಯೂ ಕಾಣಿಸಿಕೊಂಡರಲಿಲ್ಲ, ಚುನಾವಣೆ ಬಂತು ಎಂದು ಇತ್ತಿಚೆಗೆ ಜೋರು ಮಾತನಾಡುತ್ತಿದ್ದಾರೆ ಎಂದರು.
ರಾಜ್ಯ ಬಿಜೆಪಿಯಲ್ಲಿ ತಿಕ್ಕಾಟ, ಒಳಜಗಳ ಜಾಸ್ತಿ ಇದೆ
ಕಾಂಗ್ರೆಸ್ ಹೆಬ್ಬಾರ್ ಬಂದರೆ ಬೇಡಾ ಅನ್ನಲು ಆಗುತ್ತದೆಯೇ ಎಂದ ಸಚಿವ ರಾಮಲಿಂಗಾರೆಡ್ಡಿ ಕೇಳಿದರು.