![Gilani Supermarket Karwar](https://kannadavani.news/wp-content/uploads/2024/05/1000619185.jpg)
![](https://kannadavani.news/wp-content/uploads/2024/04/1000594993-724x1024.webp)
![](https://kannadavani.news/wp-content/uploads/2024/04/1000594994-726x1024.webp)
ಕಾರವಾರ:- ಬಿಜೆಪಿಯ ಚುನಾವಣಾ ಪ್ರಚಾರಕ್ಕೆ ಗೈರಾಗಿದ್ದ ಸಂಸದ ಅನಂತಕುಮಾರ್ ಹೆಗಡೆ (ananthkumar hegde) ಶಿರಸಿ(sirsi) ನಗರದ ಕೆಎಚ್ ಬಿ ಕಾಲೋನಿಯಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ ಯಲ್ಲಿ ಪತ್ನಿ ಜೊತೆ ಆಗಮಿಸಿ ತಡವಾಗಿ ಮತದಾನಮಾಡಿದರು.
![](https://kannadavani.news/wp-content/uploads/2024/05/1000629939-1024x579.jpg)
ಮತದಾನ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮತದಾನ ಮಾಡುವುದು ದೇಶದ ಜನರ ಕರ್ತವ್ಯ, ಹಾಗಾಗಿ ನಾನು ಒಬ್ಬ ಪ್ರಜೆ ಆಗಿ ಮತದಾನ ಮಾಡಿದ್ದೇನೆ ಎಂದರು.
ಇದನ್ನೂ ಓದಿ:-ಸಂಸದ ಅನಂತಕುಮಾರ್ ಹೆಗಡೆ ನಕಲಿ ಪೋಸ್ಟ್ ! ಆಪ್ತ ಕಾರ್ಯದರ್ಶಿಯಿಂದ ದೂರು?
ಇನ್ನು ಟಿಕೆಟ್ ಕೈ ತಪ್ಪಿದ ಬಳಿಕ ಸೈಲೆಂಟ್ ಆಗಿರುವ ಬಗ್ಗೆ ಹೇಳಿಕೆ ನೀಡಲು ನಿರಾಕರಿಸಿದ ಹೆಗಡೆ, ಮೋದಿ ಬಂದಾಗ ನೀವು ಯಾಕೆ ಕಾಣಿಸಿಕೊಳ್ಳಲ್ಲ ಎಂಬ ಪ್ರಶ್ನೆಗೆ ಧನ್ಯವಾದ ಎಂದು ಹೇಳಿ ತೆರಳಿದರು.