ಭಟ್ಕಳದಲ್ಲಿ ಧ್ವಜ ದಂಗಲ್ ! ಮತ್ತೆ ಹಾರಾಡಿದ ಭಗವಧ್ವಜ

158

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ದ (Bhatkal) ಹೆಬಳೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ತೆಂಗಿನಗುಂಡಿ(tenginagundi) ಗ್ರಾಮದಲ್ಲಿ ಕಳೆದ ತಿಂಗಳು ಅಧಿಕಾರಿಗಳು ತೆರವು ಗೊಳಿಸಿ ವಿವಾದಕ್ಕೆ ಕಾರಣವಾಗಿದ್ದ ಸಾವರ್ಕರ್ ಧ್ವಜದ ಕಟ್ಟೆಯಲ್ಲಿ ಇಂದು ಸಂಸದ ಅನಂತಕುಮಾರ್ ಹೆಗಡೆ ಆಡಳಿತದ ವಿರೋಧದ ನಡುವೆಯೇ ಹನುಮ ಧ್ವಜ ಹಾರಿಸಿ ಅಲ್ಲಿಯೇ ನಾಮಫಲಕ ಅಳವಡಿಸುವ ಮೂಲಕ ಮತ್ತೆ ಧ್ವಜ ದಂಗಲ್ ಕಿಡಿ ಹೊತ್ತಿಸಿದ್ದಾರೆ.

ಅಷ್ಟಕ್ಕೂ ಹಿಂದೆ ಆಗಿದ್ದೇನು?

ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ವಿವಾದ (flag controversy )ಬುಗಿಲೆದ್ದ ನಡುವೆ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ವೀರ ಸಾವರ್ಕರ್ ಹೆಸರಿನ ಧ್ವಜಕಟ್ಟೆ ವಿವಾದ ನಡೆದಿತ್ತು. ತಾಲೂಕಿನ ತೆಂಗಿನಗುಂಡಿಯಲ್ಲಿ ನಿರ್ಮಿಸಿದ ವೀರ ಸಾವರ್ಕರ್ ವೃತ್ತದಲ್ಲಿರುವ ಕಟ್ಟೆಯನ್ನ ಅನುಮತಿ ಇಲ್ಲದ ಕಾರಣ ಗ್ರಾಮ ಪಂಚಾಯತ್ ತೆರವುಗೊಳಿಸಿತ್ತು.ಈ ವಿಷಯ ಹಿಂದೂ ಸಂಘಟನೆ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು.

ಅಲ್ಲಿ ಏನಾಗಿತ್ತು? ಯಾಕೀ ವಿವಾದ ?

ಭಟ್ಕಳ ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಗಿನಗುಂಡಿಯಲ್ಲಿ ವೀರ ಸಾವರ್ಕರ ವೃತ್ತದಲ್ಲಿ ನಿರ್ಮಿಸಿದ್ದ ಕಟ್ಟೆಯನ್ನ ಗ್ರಾಮ ಪಂಚಾಯತಿ ಅಧಿಕಾರಿಗಳು ತೆರವುಗೊಳಿಸಿದ್ದರು. ಈ ಹಿಂದೆ ಗ್ರಾಮಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸಾವರ್ಕರ್ ಧ್ವಜಸ್ತಂಬ ನಿರ್ಮಿಸಲು ಸರ್ವ ಸದಸ್ಯರು ಒಪ್ಪಿಗೆ ನೀಡಿದ್ದರು.

ಹೀಗಾಗಿ ಜನವರಿ 21ರಂದು ಸ್ಥಳೀಯ ಯುವಕರು ಧ್ವಜ ಕಟ್ಟೆಯನ್ನ ನಿರ್ಮಿಸಿದ್ದರು. ಜೊತೆಗೆ ಅನುಮತಿ ಪಡೆಯದೇ ಸಾವರ್ಕರ್ ನಾಮಫಲಕ ಅಳವಡಿಸಿ ,ಭಗವಧ್ವಜ ಹಾರಿಸಿದ್ದರು.ಇನ್ನು ಭಗವದಧ್ವಜ ಹಾಗೂ ನಾಮಫಲಕ ಹಾಕಿದ್ದರಿಂದ ಅನುಮತಿ ಇರದ ಕಾರಣ ಗ್ರಾಮ ಪಂಚಾಯತ್ ಅಧಿಕಾರಿಗಳು ಫಲಕವನ್ನು ತೆರವುಗೊಳಿಸುವ ಬದಲು ,ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರೂ ಒಪ್ಪಿದ್ದ ಧ್ವಜದ ಕಟ್ಟೆಯನ್ನು ಜೆಸಿಬಿ ನೆರವಿನೊಂದಿಗೆ ತೆರವುಗೊಳಿಸಿದ್ದು ಹಿಂದು ಸಂಘಟನೆಯ ಆಕ್ರೋಶಕ್ಕೆ ಕಾರಣವಾಗಿ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿತ್ತು.

ಜನವರಿ 14ರಂದು ಇಲ್ಲಿಯ ಪಕ್ಕದ ಜಾಲಿಯ ದೇವಿ ನಗರ ಬಳಿ ಕೂಡ ನಾಮಫಲಕ ಅಳವಡಿಸುವ ವಿಚಾರಕ್ಕಾಗಿ ಗಲಾಟೆ ನಡೆದು ಸಂಘರ್ಷಕ್ಕೆ ಕಾರಣವಾಗಿತ್ತು . ನಂತರ ಉಭಯ ಜನಾಂಗಗಳೊಂದಿಗೆ ಅಧಿಕಾರಿಗಳ ಸಂದಾನದ ನಂತರ ಅಲ್ಲಿಯೇ ಶಮನಗೊಂಡಿತ್ತು. ಆದ್ರೆ ತೆಂಗಿನಗುಂಡಿಯಲ್ಲಿ ನಾಮಫಲಕ,ಭಗವದ್ವಜದ ಜೊತೆ ಸ್ತಂಬದ ಕಟ್ಟೆಯನ್ನೂ ನಾಶಪಡಿಸಿದ ಅಧಿಕಾರಿಗಳ ನಡೆಗೆ ಹಿಂದೂ ಸಂಘಟನೆ ಕಾರ್ಯಕರ್ತರ ಆಕ್ರೋಶ ಕ್ಕೆ ಕಾರಣವಾಗಿದ್ದು ಹೀಗಾಗಿ ಹೆಬಳೆ ಗ್ರಾಮ ಪಂಚಾಯತ್ ಮುಂದೆ ಹಿಂದೂಪರ ಸಂಘಟನೆ ಕಾರ್ಯಕರ್ತರು,ಗ್ರಾಮಪಂಚಾಯ್ತಿ ಸದಸ್ಯರು ಪ್ರತಿಭಟನೆ ನಡೆಸಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದರು.

ಈ ಹಿಂದೆಯೇ ಇಲ್ಲಿ ಧ್ವಜದ ಕಟ್ಟೆ ನಿರ್ಮಿಸಲು ಗ್ರಾಮ ಪಂಚಾಯ್ತಿ ಸದಸ್ಯರೆಲ್ಲರೂ ಒಪ್ಪಿದ್ದಾರೆ. ಹೀಗಿದ್ದರೂ ಜನವರಿ 26 ರಂದು ಸರ್ಕಾರಿ ರಜೆ ಇದ್ದರೂ ಅಧಿಕಾರಿಗಳು ಧ್ವಜ ಸ್ತಂಭ ನಾಶಮಾಡಿ ಕ್ರಮ ಕೈಗೊಂಡಿದ್ದಾರೆ,ಅಧ್ಯಕ್ಷರ ಗಮನಕ್ಕೂ ತಾರದೇ ಹೀಗೆ ನಾಶಮಾಡಲು ಅಧಿಕಾರಿಗಳಿಗೆ ಯಾರು ಒತ್ತಡ ಹಾಕಿದ್ದಾರೆ ಎಂದು ಗ್ರಾಮಪಂಚಾಯ್ತಿ ಸದಸ್ಯ
ಸುಬ್ರಾಯ್ ದೇವಾಡಿಗ ಆಕ್ರೋಶ ವ್ಯಕ್ತಪಡಿಸಿದ್ರೆ ,ಇದಕ್ಕೆ ಗ್ರಾಮಪಂಚಾಯ್ತಿ ಅಧ್ಯಕ್ಷರಾದ
ಪಾರ್ವತಿ ನಾಯ್ಕ ಸಹ ದ್ವನಿಗೂಡಿಸಿದ್ದರು.

ಇನ್ನು ಗ್ರಾಮ ಪಂಚಾಯತಿಯಲ್ಲಿ ಹಿಂದೆ ವೀರ ಸಾವರ್ಕರ್ ವೃತ್ತದ ಹೆಸರಿಡುವ ಸಂಬಂಧ ಗ್ರಾಮದ ಜನರು ಗ್ರಾಮ ಪಂಚಾಯತ್ ಗೆ ಅರ್ಜಿ ನೀಡಿದ್ದರು. ಜೊತೆಗೆ ಅನಧಿಕೃತ ನಾಮಫಲಕವನ್ನು ತೆರವುಗೊಳಿಸುವ ಕುರಿತು ಗ್ರಾಮಪಂಚಾಯ್ತಿ ಸಭೆಯಲ್ಲಿ ಚರ್ಚೆ ನಡೆದಿತ್ತು. ಹೀಗಾಗಿ ಅನುಮತಿ ಇಲ್ಲ ಎಂಬ ಕಾರಣ ನೀಡಿ ಹಿಂದೂ ಸಂಘಟನೆಯ ಯುವಕರು ನಿರ್ಮಿಸಿದ ಕಟ್ಟೆಯನ್ನ ಪಂಚಾಯತ್ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಇನ್ನು ನಾಮಫಲಕ ,ಭಗವದ್ವಜ ತೆಗೆಯುವ ಜೊತೆ ಕಟ್ಟೆಯನ್ನೂ ನೆಲಸಮ ಮಾಡಿದ್ದಕ್ಕೆ
ರೊಚ್ಚಿಗೆದ್ದ ಹಿಂದೂ ಕಾರ್ಯಕರ್ತರು ,ಸ್ಥಳೀಯರು ಸ್ಥಳದಲ್ಲಿಯೇ ಪುನಃ ಧ್ವಜ ಕಟ್ಟೆ ನಿರ್ಮಿಸಿದ್ದಾರಲ್ಲದೇ ವೀರ ಸಾವರ್ಕರ್ ಹೆಸರಿನಲ್ಲಿ ಬಾವುಟ ಹಾರಿಸುವ ಪಣ ತೊಟ್ಟಿದ್ದರು. ಈ ಘಟನೆ ಸೂಕ್ಷತೆ ಅರಿತ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದು . ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನ ನಿಯೋಜಿಸಿ ಧ್ವಜ ಹಾರಿಸದಂತೆ ತಡೆದಿದ್ದರು.

ಇದೀಗ ಸಂಸದರ ಮಧ್ಯ ಪ್ರವೇಶಿಸಿ ಅನುಮತಿ ಇಲ್ಲದೇ ಧ್ವಜ ಹಾರಿಸಿ ನಾಮಫಲಕ ಅಳವಡಿಸಿದ್ದು ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!