ಕಾರವಾರ :- ಶ್ರೀಗಂಧ ಕಳ್ಳತನ ಮಾಡುತಿದ್ದ ಕಳ್ಳನನ್ನು ಮಾಲು ಸಮೇತ ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಮರಾಠಿ ಕೊಪ್ಪದಲ್ಲಿ ನಡೆದಿದೆ.
ಬಂಧಿತನಿಂದ ಆರು ಕೆಜಿ ಐನೂರು ಗ್ರಾಮ್ ತೂಕದ 65ಸಾವಿರ ಮೌಲ್ಯದ ಶ್ರೀಗಂಧ ,ಕೃತ್ಯಕ್ಕೆ ಬಳಸಿದ ವಸ್ತುಗಳು ಹಾಗೂ ವಾಹನ ವನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಯು ಶಿರಸಿಯ ಪುಣ್ನಮನೆಯ ಸಂತೋಷ್ ಮಹೇಶ್ ಮೊಗೇರ್ ಎಂಬುವವನಾಗಿದ್ದು, ಪುಟ್ಟನಮನೆ ಅರಣ್ಯದಲ್ಲಿ ಶ್ರೀಗಂಧದ ಗಿಡ ಕಡಿದು ಮಾರಾಟಕ್ಕೆ ತೆರಳುತ್ತಿರುವಾಗ ಪೊಲೀಸರು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ರವಿ ನಾಯ್ಕ ಹಾಗೂ ವೃತ್ತ ನಿರೀಕ್ಷಕ ಪ್ರದೀಪ್ ಬಿ.ಯು ರವರ ಮಾರ್ಗದರ್ಶನದಲ್ಲಿ ಹೊಸಮಾರುಕಟ್ಟೆ ಠಾಣೆಯ ಪಿಎಸ್ಐ ನಾಗಪ್ಪ ನೇತೃತ್ವದಲ್ಲಿ ಸಿಬ್ಬಂದಿಗಳಾದ ಇಸ್ಮಾಯಿಲ್ ಕೊಣನಕೇರಿ,ರಾಮಯ್ಯ ಪೂಜಾರಿ,ಹನುಮಂತ ಮಾಕಾಪುರ,ಮೊಹನ ನಾಯ್ಕ ರವರನ್ನು ಪಾಲ್ಗೊಂಡಿತ್ತು.
ಘಟನೆ ಸಂಬಂಧ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.