ಕಾರವಾರ:- ಸಂಸದ ಅನಂತಕುಮಾರ ಹೆಗಡೆ ಒಬ್ಬ ಹುಚ್ಚ ಅವನಿಗೆ ಸಂಸ್ಕ್ರತಿ ಇಲ್ಲ ಅವನ ಬಗ್ಗೆ ಮಾತಾಡಲು ನನಗೆ ಹುಚ್ಚು ಹಿಡಿದಿಲ್ಲ ಎಂದು ಅನಂಕುಮಾರ್ ಹೆಗಡೆ ವಿರುದ್ಧ ಸಚಿವ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.
ಇಂದು ಶಿರಸಿಯಲ್ಲಿ ಮಾತನಾಡಿದ ಅವರು ಪ್ರಜಾಪ್ರಭುತ್ವದಲ್ಲಿ ಜನರಿಂದ ಮತ ಪಡೆದು ಜನರಿಗೆ ದ್ರೋಹ ಮಾಡಿದ ಮೊದಲ ವ್ಯಕ್ತಿ ಅನಂತಕುಮಾರ ಹೆಗಡೆ,ನಾಲ್ಕು ವರ್ಷ ಕೂತ್ಕೋಳೋದು, ಆಮೇಲೆ ಜನರ ವಿಶ್ವಾಸಕ್ಕೆ ಮೋಸ ಮಾಡೋದು,ಪ್ರಜಾಪ್ರಭುತ್ವದ ಬಗ್ಗೆ ವಿರೋಧ ಮಾಡಿದವ್ರಿಗೆ ನಾವು ಧಿಕ್ಕಾರ ಮಾಡ್ಲೆಬೇಕು.
ಇದನ್ನೂ ಓದಿ:-ಚಕ್ ಬೌನ್ಸ್ ಪ್ರಕರಣ- ಸಚಿವ ಮಧು ಬಂಗಾರಪ್ಪಗೆ ದಂಡದ ಜೊತೆ ಜೈಲು ಶಿಕ್ಷೆ?!
ಜನ ಅವನನ್ನ ಬದಲಾವಣೆ ಮಾಡ್ತಾರೆ,ಬಿಜೆಪಿ ಅವನಿಗೇ ಟಿಕೆಟ್ ಕೊಡ್ಬೇಕು ಆಗ ಬರ್ತೀವಿ ನಾವು, ಅವರನ್ನ ಉಪಚಾರ ಮಾಡೋಕೆ.ನಾನು ಕೂಡ ಸೋತಿದೀನಿ,ಆದ್ರೆ ಮಾನ ಮರ್ಯಾದೆ ಬಿಟ್ಟು ಈ ತರ ಮಾಡೋದನ್ನ ಮಾಡಿಲ್ಲ. ಮನುಷ್ಯನೇ ಅಲ್ಲ ಅವನು,ತಲೆಕೆಟ್ಟಿರೋ ವ್ಯಕ್ತಿ, ಮಾನ ಮರ್ಯಾದೆ ಇಲ್ಲದಿರೋ ವ್ಯಕ್ತಿ ಎಂದು ಏಕವಚನದಲ್ಲೇ ಕಿಡಿಕಾರಿದರು.