ಕಾರವಾರ :- ಪಾಕಿಸ್ತಾನದಲ್ಲಿ ಸಿಲುಕಿಕೊಳ್ಳುವ ಮೀನುಗಾರರ ಸತ್ಯ ಕಥೆಯನ್ನು ಆಧರಿಸಿದ ತಾಂಡೇಲ್ ಸಿನಿಮಾ ಚಿತ್ರೀಕರಣ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬೇಲಿಕೇರಿ ಬಂದರು ಹಾಗೂ ಗಾಬಿತ್ ಕೇಣಿ ಗ್ರಾಮದ ಬಳಿ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ತಾಂಡೇಲ್ ಸಿನಿಮಾ ದಲ್ಲಿ ನಾಗ ಚೈತನ್ಯ, ಸಾಯಿ ಪಲ್ಲವಿ ಜೋಡಿಯಾಗಿ ಅಭಿನಯಿಸುತಿದ್ದು 2021 ರಲ್ಲಿ ತೆರೆಕಂಡಿದ್ದ” ಲವ್ ಸ್ಟೋರಿ ” ಚಿತ್ರದಲ್ಲಿ ಈ ಜೋಡಿ ಯಶಸ್ಸು ಕಂಡಿದ್ದರು.
![](https://kannadavani.news/wp-content/uploads/2024/01/TextMaster_01-06-07.15.08-1024x639.webp)
ನಾಗಚೈತನ್ಯರವರು ಸತತ ಸೋಲಿನ ಮೂಲಕ ಹೊಸ ಕಮ್ ಬ್ಯಾಕ್ ಗೆ ಸಿದ್ದತೆ ಮಾಡಿಕೊಂಡಿದ್ದು ಕಳೆದ ತಿಂಗಳಷ್ಟೆ ತಾಂಡೇಲ್ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿತ್ತು.
ಇದನ್ನೂ ಓದಿ:-ಕರ್ನಾಟಕದ ಕರಾವಳಿ ,ಮಲೆನಾಡು ಭಾಗದಲ್ಲಿ ಎರಡು ದಿನ ಮಳೆ.
ಚಿತ್ರದ ಶೀರ್ಷಿಕೆ ಜೊತೆ ಮೀನುಗಾರ ಎಂಬುದನ್ನು ಹಾಕಿದ್ದ ಟೀಸರ್ ಸಖತ್ ವೈರಲ್ ಆಗಿತ್ತು. ಇದೀಗ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಭಾಗದ ಬೇಲಿಕೇರಿ ಭಾಗದಲ್ಲಿ ಕಳೆದ ಡಿಸೆಂಬರ್ 25 ರಿಂದ ಹಲವು ದೃಶ್ಯಗಳನ್ನು ಈ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ. ವಿಶೇಷ ಸಟ್ ಗಳನ್ನು ನಿರ್ಮಿಸಲಾಗಿದ್ದು ಇದರ exclusive ಫೋಟೋಗಳು ಕನ್ನಡವಾಣಿಗೆ ದೊರೆತಿದ್ದು ಜನವರಿ 15 ರೊಳಗೆ ಈ ಭಾಗದಲ್ಲಿ ಚಿತ್ರೀಕರಣ ಪೂರ್ಣಗೊಳ್ಳಲಿದೆ.
![](https://kannadavani.news/wp-content/uploads/2024/01/TextMaster_01-06-07.16.42-1024x631.webp)
ಬೇಲಿಕೇರಿ ಬಂದರು ,ಅರಬ್ಬಿ ಸಮುದ್ರದ ಚಿತ್ರಣ,ಕರಾವಳಿ ಭಾಗದ ಮೀನುಗಾರರ ಸಂಸ್ಕೃತಿಯ ನ್ನು ಈ ಭಾಗದಲ್ಲಿ ಇದೀಗ ಚಿತ್ರೀಕರಣ ಮಾಡಲಾಗುತ್ತಿದೆ. ಕರಾವಳಿ ಭಾಗದಿಂದ ಮೀನುಹಿಡಿಯಲು ಹೋಗುವ ಮೀನುಗಾರರ ತಂಡ ಅಬ್ಬರದ ಗಾಳಿಗೆ ದೋಣಿ ಸಿಲಿಕಿಕೊಂಡು ಪಾಕಿಸ್ತಾನದ ಭಾಗಕ್ಕೆ ಹೋಗುವ ದೃಶ್ಯ ವಿದ್ದು ,ಈ ಮೀನುಗಾರರನ್ನು ಪಾಕಿಸ್ತಾನದ ನೌಕಾಪಡೆ ಬಂಧಿಸುತ್ತದೆ. ಹೀಗೆ ಬಂಧನವಾದ ಮೀನುಗಾರರು ಅಲ್ಲಿಂದ ತಪ್ಪಿಸಿಕೊಳ್ಳುವ ಕಥೆ ಇದಾಗಿದ್ದು ,ಇದರಲ್ಲಿ ನಾಯಕನಾಗಿ ನಟಿಸಿರುವ ನಾಗಚೈತನ್ಯ ಹಾಗೂ ನಾಯಕಿಯಾಗಿ ನಟಿಸಿರುವ ಸಾಯಿಪಲ್ಲವಿ ಪ್ರೇಮ ಕಥೆ ಒಳಗೊಂಡಿದ್ದು ಯಾಕ್ಷನ್ ಸಹ ಈ ಭಾಗ ದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ .
ಇದನ್ನೂ ಓದಿ:-ಬಿಜೆಪಿ ರಾಜ್ಯಾಧ್ಯಕ್ಷರ ಭೇಟಿ ಮಾಡಿದ ಸಂಸದ ಅನಂತಕುಮಾರ್ ಹೆಗಡೆ ಲೋಕಸಭೆಗೆ ಸ್ಪರ್ಧೆ
ಜಿಲ್ಲೆಯ ಕರಾವಳಿ ತೀರದ ಹಾಗೂ ಅರಬ್ಬಿ ಸಮುದ್ರದ ಸುಂದರ ದೃಶ್ಯಗಳನ್ನು ಸೆರೆ ಹಿಡಿಯಲಾಗಿದ್ದು ಈ ಸಿನಿಮಾವನ್ನು ಚಂದೂ ಮೊಂಡೇಟಿ ನಿರ್ದೇಶಿಸುತ್ತಿದ್ದಾರೆ.