BREAKING NEWS
Search

ಶಿವರಾಮ್ ಹೆಬ್ಬಾರ್ ಅಧಿಕಾರ,ಹಣದ ಆಸೆಗೆ ಕಾಂಗ್ರೆಸ್ ಬಿಟ್ಟು ಓಡಿಹೋಗಿದ್ದಾರೆ.ಭೀಮಣ್ಣ ನಾಯ್ಕ ಕಿಡಿ

187

ಕಾರವಾರ :- ಕಾಂಗ್ರೆಸ್ ಗೆ ಯಲ್ಲಾಪುರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಶಿವರಾಮ್ ಹೆಬ್ಬಾರ್(MLA Shivaram hebbar) ಬರುವ ವಿಚಾರವಕ್ಕೆ ಇದೀಗ ಜಿಲ್ಲಾ ಕಾಂಗ್ರೆಸ್ ನಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತಿದ್ದು ಶಿರಸಿಯ ಕಾಂಗ್ರೆಸ್( congress) ಶಾಸಕ ಭೀಮಣ್ಣ ನಾಯ್ಕ( Mla Bemanna nail) ವಿರೋಧ ವ್ಯಕ್ತಪಡಿಸಿದ್ದಾರೆ‌.

ವಿಡಿಯೋ ನೋಡಿ:-

ಇಂದು ಶಿರಸಿಯಲ್ಲಿ (sirsi)ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹಣ ಅಧಿಕಾರದ ಆಸೆಯಿಂದ ಕಾಂಗ್ರಸ್ ಬಿಟ್ಟು ಓಡಿಹೋಗಿದ್ದಾರೆ, ಈಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದರಿಂದ ಅಧಿಕಾರ,ಹಣದ ಆಸೆಗೆ ಕಾಂಗ್ರಸ್ ಗೆ ಬರುತಿದ್ದಾರೆ.ಇಲ್ಲಿಗೆ ಯಾಕೆ ಬರುತ್ತಾರೆ ಎಂಬುದನ್ನ ಜನರಿಗೆ ,ಕಾಂಗ್ರೆಸ್ ಕಾರ್ಯಕರ್ತರಿಗೆ ತಿಳಿಸಿ ಬರಲಿ.

ಇದನ್ನೂ ಓದಿ:-ಬಿಜೆಪಿ ಪದಾಧಿಕಾರಿಗಳ ಷಡ್ಯಂತ್ರ|ಕಾದು ನೋಡ್ತೀನಿ ಎಂದ ಶಿವರಾಮ್ ಹೆಬ್ಬಾರ್ !


ಬಂಡ ರಾಜಕಾರಣ ಮಾಡುವುದನ್ನು ಹೆಬ್ಬಾರ್ ಬಿಡಲಿ,
ಇವರು ಅಧಿಕಾರ ಇದ್ದಾಗ ಏನು ಮಾಡಿದ್ದಾರೆ ಎಂದು ಹೇಳಲಿ,ನಾನು 13 ವರ್ಷ ಉತ್ತರ ಕನ್ನಡ ಜಿಲ್ಲೆಯ (uttrakannada )ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ.ಎಲ್ಲರ ಜೊತೆ ಸೇರಿ ಪಕ್ಷದ ಸಂಘಟನೆಗೆ ಕೆಲಸ ಮಾಡಿದ್ದೇನೆ.
ಆಗ ಇವರ ಕೊಡಿಗೆ ಏನಿತ್ತು ಅಧಿಕಾರಕ್ಕೆ ಬಂದ ನಂತರ ಕ್ಷೇತ್ರಕ್ಕೆ ಇವರ ಕೊಡಿಗೆ ಏನಿತ್ತು ಎಂಬುದು ಗೊತ್ತಿದೆ ಎಂದು ಕಿಡಿ ಕಾರಿದರು.

ಇದನ್ನೂ ಓದಿ:- ಕಾಂಗ್ರೆಸ್ ಸೆರಲು ಮುಖಂಡರ ಅಭಿಪ್ರಾಯ ಸಂಗ್ರಹಿಸಿದ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!