ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದೊಡ್ಡಮನೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಮಾದ್ಲಮನೆ ಯಲ್ಲಿ ಇಂದು ಸಿಡಿಲು ಬಡಿದು ಮಂದಿರಕ್ಕೆ ಹಾನಿಯಾಗಿದೆ.
ಸಿಡಿಲ ಹೊಡೆತಕ್ಕೆ ಮಂದಿರದ ಗೋಡೆಗಳು ಹಾನಿಯಾಗಿದ್ದು ಮಂದಿರದ ಒಳಭಾಗದಲ್ಲಿದ ಪಾತ್ರೆಗಳು, ಮೈಕ್ ಸಟ್ಟುಗಳು ಸುಟ್ಟು ಕರಕಲಾಗಿದ್ದು ಅಂದಾಜು ಏಳು ಲಕ್ಷದ ವರೆಗೆ ಹಾನಿಯಾಗಿದೆ.
ಅದೃಷ್ಟವಶಾತ್ ಮಂದಿರದಲ್ಲಿ ಯಾರೂ ಇಲ್ಲದಿದ್ದರಿಂದ ಪ್ರಾಣಹಾನಿ ಸಂಭವಿಸಿಲ್ಲ.