BREAKING NEWS
Search

Joida| ಪೊಲೀಸ್ ಅಧಿಕಾರಿಗೆ ಮೆಸೇಜ್ ಮಾಡಿ ***ಗೆ ಕರೆದು ಠಾಣೆಯಲ್ಲೇ ಹೊಡೆದಾಡಿಕೊಂಡ ಕಾಸ್ಟೆಬಲ್ ಸಸ್ಪೆಂಡ್!

157

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಠಾಣೆಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೂ ಸೇರಿ ಇಬ್ಬರು ಪೊಲೀಸ್ ಕಾಸ್ಟೇಬಲ್ ಗಳು ಠಾಣೆಯಲ್ಲೇ ಬಡಿದಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಯಿಡಾ ಠಾಣೆಯ ಪಿಸಿ ಮುತ್ತಪ್ಪ ನನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಷ್ಣುವರ್ಧನ್ ಆದೇಶಿಸಿದ್ದಾರೆ.

ಮಹಿಳಾ ಅಧಿಕಾರಿಗೆ ಮುತ್ತಪ್ಪ ಮೊಬೈಲ್ ನಲ್ಲಿ ಕೆಟ್ಟದಾಗಿ ಮೆಸೇಜ್ ಮಾಡಿದ್ದು , ****ಗೆ ಕರೆದಿದ್ದನು. ಈ ವೆಸೇಜ್ ನನ್ನು ನೋಡಿದ ಮಹಿಳಾ ಅಧಿಕಾರಿ ಠಾಣೆಯಲ್ಲಿ ಬ್ರೀಫಿಂಗ್ ಸಮಯದಲ್ಲಿ (ರೋಲ್ ಕಾಲ್) ಠಾಣೆಯ ಎಲ್ಲಾ ಸಿಬ್ಬಂದಿಗಳ ಮುಂದೆ ಆತ ಮಾಡಿದ ಮೆಸೇಜ್ ನನ್ನು ತೋರಿಸಿ ಎಚ್ಚರಿಕೆ ನೀಡಿದ್ದರು. ಈ ವೇಳೆ ಅದೇ ಠಾಣೆಯ ಸಿಬ್ಬಂದಿ ಸಂದೀಪ್ ರವರು ಸಹ ಆತನ ಕೆಟ್ಟವರ್ತನೆಗೆ ತರಾಟೆ ತೆಗೆದುಕೊಂಡಿದ್ದರು. ಈವೇಳೆ ಮಾತಿಗೆ ಮಾತು ಬೆಳೆದು ಇಬ್ಬರೂ ಠಾಣೆಯಲ್ಲೇ ಹೊಡೆದಾಡಿಕೊಂಡಿದ್ದರು.
ಈ ವಿಷಯ ವಿಡಿಯೋ ಸಮೇತವಾಗಿ ಕನ್ನಡವಾಣಿಗೆ ದೊರೆತಿದ್ದು ಕೆಟ್ಟ ವರ್ತನೆ ತೋರಿದ್ದ ಕುರಿತು ವರದಿ ಪ್ರಸಾರ ಮಾಡಲಾಗಿತ್ತು. ಈ ವರದಿ ಆಧಾರದಲ್ಲಿ ಎಸ್.ಪಿ ವಿಷ್ಣುವರ್ಧನ್ ರವರು ಮುತ್ತಪ್ಪನನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.

ಇದನ್ನೂ ಓದಿ:- ಜೋಯಿಡಾ ಠಾಣೆಯಲ್ಲಿ ಬಡಿದಾಡಿಕೊಂಡ ಪೊಲೀಸರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!