ಬೆಂಗಳೂರು, ಜನವರಿ28:- ರಾಜ್ಯ ಸರ್ಕಾರ state government) ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇವಸ್ಥಾನಗಳಲ್ಲಿ (temple) ಸೇವೆ ಸಲ್ಲಿಸುತ್ತಿರುವ ಅರ್ಚಕರು,ನೌಕರರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ( education )ಪ್ರೋತ್ಸಾಹ ಧನ ನೀಡುತಿದ್ದು ಮುಜರಾಯಿ ಇಲಾಖೆಯಿಂದ ಅರ್ಹ ರಿಂದ ಅರ್ಜಿ ಕರೆದಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಫಲಾನುಭವಿಗಳು ಜನವರಿ 31ರ ಒಳಗೆ ಸಂಬಂದಪಟ್ಟ ಜಿಲ್ಲೆಯ ಧಾರ್ಮಿಕ ದತ್ತಿ ಇಲಾಖೆಯಲ್ಲಿ ವಿದ್ಯಾನಿಧಿ ಅರ್ಜಿ ಪಡೆದು ಸಲ್ಲಿಸಬೇಕು. ಅರ್ಜಕರು,ನೌಕರು ಈ ಅರ್ಜಿ ಸಲ್ಕಿಸಬಹುದಾಗಿದೆ.
ದಾಖಲೆಗಳು ಏನು ಬೇಕು?.
ಇದನ್ನೂ ಓದಿ:-ರಾಜ್ಯದ ಜನರಿಗೆ ಗೃಹ ಜ್ಯೋತಿ ನಿಯಮ ಬದಲಾಯಿಸಿದ ಸರ್ಕಾರ? ಏನು ಬದಲಾವಣೆ ವಿವರ ನೋಡಿ.
ಯಾವ ದೇವಸ್ಥಾನ ದಲ್ಲಿ ಕರ್ತವ್ಯ ನಿರ್ವಹಿಸುತಿದ್ದೀರಿ ಎಂಬ ದೃಡೀಕರಣ ಪತ್ರ,ಅರ್ಜಿ ಸಲ್ಲಿಸುವ ಅರ್ಜಿದಾರರು ಪ್ರಸಕ್ತ ಸಾಲಿನಲ್ಲಿ ಯಾವ ತರಗತಿಯಲ್ಲಿ ಓದುತಿದ್ದಾರೆ ಎಂಬ ಮಾಹಿತಿ,ವಿದ್ಯಾಸಂಸ್ಥೆ ಹೆಸರು ,ವಿಳಾಸ ,ಅರ್ಜಿದಾರರು ಈ ಹಿಂದಿನ ವರ್ಷ ವ್ಯಾಸಂಗ ಮಾಡಿ ಉತ್ತೀರ್ಣರಾದ ಬಗ್ಗೆ ಅಂಕಪಟ್ಟಿ ದೃಡೀಕರಣ,/ವಿದೇಶದಲ್ಲಿ ಓದುತಿದ್ದರೇ ಸಂಬಂಧಪಟ್ಟ ವಿಶ್ವವಿದ್ಯಾಲಯ/ಸಂಸ್ಥೆ/ಕಾಲೇಜಿನಿಂದ ದೃಡೀಕರಣ ಪತ್ರ, ಅರ್ಜಿದಾರರ ಬ್ಯಾಂಕ್ ವಿವರ ನೀಡಬೇಕು.
ಅರ್ಜಿ ದೊರೆಯುವುದು ಎಲ್ಲಿ?
ಆಯಾ ಜಿಲ್ಲೆಯ ಮುಜರಾಯಿ ಇಲಾಖೆಯ ತಹಶಿಲ್ದಾರರನ್ನು ಸಂಪರ್ಕಿಸಿ ಅರ್ಜಿ ಪಡೆಯಬೇಕು.
ಅರ್ಜಿ ವಿವರ ಈ ಕೆಳಗಿನಂತಿದೆ:-
![](https://kannadavani.news/wp-content/uploads/2024/01/AddText_01-28-03.32.01-722x1024.webp)
![](https://kannadavani.news/wp-content/uploads/2024/01/AddText_01-28-03.31.32-720x1024.webp)