ಬೆಂಗಳೂರು:- ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದ್ದು, ಗುರುವಾರವಾದ ಇಂದಿ ಅಲ್ಪ ಚಳಿ ಮತ್ತು ಒಣಹವೆ ಮುಂದುವರಿಯಲಿದೆ. ಕೆಲವೆಡೆ ಮೋಡಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ:-ಜೋಯಿಡಾ|ಮೂಲಭೂತ ಸೌಕರ್ಯದಿಂದ ವಂಚನೆ ಚುನಾವಣೆ ಬಹಿಷ್ಕಾರದ ಎಚ್ಚರಿಕೆ
ಉತ್ತರ ಕನ್ನಡ, ಚಾಮರಾಜನಗರ, ಕೋಲಾರ, ರಾಮನಗರಗಳ ಒಂದೆರಡು ಅಲ್ಪ ಮಳೆಹನಿ ಬೀಳಲಿದೆ(rain) ಉಳಿದಂತೆ ಚಳಿ ಮತ್ತು ಒಣ ಹವೆ ಇರಲಿದೆ. ಕೆಲವು ಕಡೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ನಿರೀಕ್ಷಿಸಬಹುದು. ಕರಾವಳಿ ಕರ್ನಾಟಕದ ಭಾಗದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸದ್ಯಕ್ಕೆ ಮೋಡಕವಿದ, ಒಣಹವೆ ಇರಲಿದ್ದು, ಮೂರ್ನಾಲ್ಕು ದಿನಗಳ ನಂತರ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡು ಭಾಗದಲ್ಲಿ ಬಿಸಿಲು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದನ್ನೂ ಓದಿ;- ಜೋಯಿಡಾ|ಮೂಲಭೂತ ಸೌಕರ್ಯದಿಂದ ವಂಚನೆ ಚುನಾವಣೆ ಬಹಿಷ್ಕಾರದ ಎಚ್ಚರಿಕೆ
ಪ್ರಮುಖ ನಗರದ ತಾಪಮಾನ.
ಬೆಂಗಳೂರು: 27-18
ಮಂಗಳೂರು: 31-22
ಶಿವಮೊಗ್ಗ: 31-18
ಬೆಳಗಾವಿ: 30-18
ಮೈಸೂರು: 31-18
ಉಡುಪಿ: 31-22
ಕಾರವಾರ: 33-24
ಚಿಕ್ಕಮಗಳೂರು: 26-16
ದಾವಣಗೆರೆ: 31-19
ಹುಬ್ಬಳ್ಳಿ: 32-19
ಚಿತ್ರದುರ್ಗ: 29-18
ಹಾವೇರಿ: 32-19