Uttra Kannada kumta sirsi news April month

ಗೋಕರ್ಣದಲ್ಲಿ ಕಳ್ಳತನ| ಬಿಸಲ ಬೇಗೆಗೆ ಬಾವಿಗಿಳಿದ ಕಾಳಿಂಗ!

73

ಗೋಕರ್ಣ :- ಮನೆ ಬಾಗಿಲು ಮುರಿದು ಚಿನ್ನಾಭರಣ ದೋಚಿ ಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ(gokarna) ಬಿಜ್ಜೂರಿನಲ್ಲಿ ಇಂದು ನಡೆದಿದೆ.

ಬಿಜ್ಜೂರಿನ ಉದಯ್ ಗೌಡ ಎಂಬುವವರ ಮನೆಯಲ್ಲಿ ಕಳ್ಳತನವಾಗಿದ್ದು ಮನೆಯಲ್ಲಿದ್ದ
34 ಗ್ರಾಮ್ ಚಿನ್ನಾಭರಣ (gold)ದೋಚಿ ಕಳ್ಳರು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಗೋಕರ್ಣ ಪೊಲೀಸರು ಹಾಗೂ ಶ್ವಾನದಳದಿಂದ ತಪಾಸಣೆ ಕೈಗೊಂಡಿದ್ದು
ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಸಿ:- ಬಿಸಲ ಬೇಗೆಗೆ ನೀರಿನ ಮೂಲ ಅರಸಿ ಬಂದ ಕಾಳಿಂಗ ಸರ್ಪವನ್ನು ರಕ್ಷಿಸಿ ಮರಳಿ ಕಾಡಿಗೆ ಬಿಟ್ಟ ಘಟನೆ ಉತ್ತರ ಕನ್ನಡ (uttra kannda)ಜಿಲ್ಲೆಯ ಶಿರಸಿಯ ಹೆಗಡೆ ಕಟ್ಟಾ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ:-Sirsi| ನಗರಸಭೆ ವಾಹನ ಹರಿದು ಶಿಕ್ಷಕಿ ಸಾವು

ಜಿಲ್ಲೆಯಲ್ಲಿ ಅಧಿಕ ತಾಪಮಾನ ವಿದ್ದು ಬಿಸಿಲ ಬೇಗೆಗೆ ತಂಪಿನ ಜಾಗ ಅರಿಸಿ ಬಂದ ಕಾಳಿಂಗ ಸರ್ಪ (snake) ಹೆಗಡೆ ಕಟ್ಟ ಗ್ರಾಮದಲ್ಲಿನ ಬಾವಿಗೆ (well) ಇಳಿದು ದೇಹ ತಂಪಾಗಿಸಿಕೊಳ್ಳುತ್ತಿರುವ ವೇಳೆ ನೀರು ಸೇದಲು ಬಂದ ಸ್ಥಳೀಯರು ಕಳಿಂಗ ಸರ್ಪ ನೋಡಿ ಉರುಗ ರಕ್ಷಕ ಪ್ರಶಾಂತ್ ಹುಲೇಕಲ್ ರವರಿಗೆ ಮಾಹಿತಿ ನೀಡಿದ್ದಾರೆ,ಸ್ಥಳಕ್ಕಾಗಮಿಸಿದ ಉರುಗ ಪ್ರೇಮಿ ಪ್ರಶಾಂತ್ ರವರು ಸುರಕ್ಷಿತವಾಗಿ ಹಿಡಿದು ಸ್ಥಳೀಯ ಅರಣ್ಯ ಭಾಗದಲ್ಲಿ ಬಿಟ್ಟಿದ್ದಾರೆ.

ಇದನ್ನೂ ಓದಿ:-ಭಟ್ಕಳದಲ್ಲಿ ಶಿಲಾಯುಗದ ಬಂಡೆಚಿತ್ರ ನೆಲಶೋಧ! ಏನಿದು ವಿವರ ನೋಡಿ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!