ಕಾರವಾರ,ಜನವರಿ 25 :- ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿರುವ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದ (Murudeshwara )ನೇತ್ರಾಣಿಯಲ್ಲಿ ನಡೆಯುವ ಸ್ಕೂಬಾ ಡೈವಿಂಗ್ ಗೆ ಜಿಲ್ಲಾ ಪ್ರವಾಸೋದ್ಯಮ ಸಮಿತಿ ( tourism) ಟೆಂಡರ್ ಅವಧಿ ಮುಗಿದ ಕಾರಣ ಸ್ಥಗಿತ ಗೊಳಿಸುವಂತೆ ಸೂಚನೆ ನೀಡಿದೆ.
ಇದನ್ನೂ ಓದಿ:-ಭಟ್ಕಳ ಹಿಂದೂ ಕಾರ್ಯಕರ್ತರಿಗೆ ವಿಡಿಯೋ ಮಾಡಿ ದುಬೈ ನಿಂದ ದಮ್ಕಿ ನೀಡಿದ ಮುಸ್ಲಿಂ ಯುವಕ!
ಈ ಕುರಿತು ಆದೇಶ ನೀಡಿರುವ ಜಿಲ್ಲಾಪ್ರವಾಸೋಧ್ಯಮ ಇಲಾಖೆ ಜನವರಿ 23 ರಂದು ಗುತ್ತಿಗೆ ಪಡೆದ ಜಲಸಾಹಸ ಕ್ರೀಡಾ ಸಂಸ್ಥೆಗಳಾದ ನೇತ್ರಾಣಿ ಅಡ್ವೆಂಚರ್ಸ್ ,ಅಬು ಜುವೇಬ ಹೆಗಡೆ,ರೀಫ್ ಅಡ್ವೆಂಚರ್ ಗೆ ಸೂಚನೆ ನೀಡಿದ್ದು ,ಅದರಂತೆ ಟೆಂಡರ್ ಆದೇಶದಂತೆ 24 ಜನವರಿ 2024 ನಲ್ಲಿ ಸ್ಕೂಬಾ ಡೈವಿಂಗ್ (scuba diving )ಸ್ಥಗಿತ ಗೊಳಿಸಲು ಸೂಚಿಸಿದ್ದು ಮುಂದಿನ ಟೆಂಡರ್ ಆಗುವ ವರೆಗೂ ಸ್ಕೂಬಾ ಡೈವಿಂಗ್ ನಡೆಸದಂತೆ ನಿರ್ಬಂಧಿಸಿದೆ.