ಕಾರವಾರ:-KSRTC ಬಸ್ ನಲ್ಲಿ ಪ್ರಯಾಣಿಸುವ ( bus travel )ಪ್ರಯಾಣಿರನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತಿದ್ದ ಇಬ್ಬರು ಮಹಿಳಾ ಕಳ್ಳರನ್ನು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಠಾಣೆ (mundagodu) ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:-Karwar :ನಡುರಸ್ತೆಯಲ್ಲೇ ತುಂಡಾಯ್ತು KSRTC ಬಸ್ ಚಕ್ರದ ಲಿಂಕ್!
ಶಿವಮೊಗ್ಗ ಜಿಲ್ಲೆಯ (shivamogga) ಭದ್ರಾವತಿಯ ಶಾಂತಿ ವೆಂಕಟರಮಣ ಕಲ್ಲವಡ್ಡರ್ ಹಾಗೂ ಮೀನಾಕ್ಷಿ ಕಲ್ಲವಡ್ಡರ್ ಬಂಧಿತ ಆರೋಪಿಗಳಾಗಿದ್ದಾರೆ.
ಉಚಿತ ಬಸ್ ನಲ್ಲಿ ಪ್ರಯಾಣಿಸುತಿದ್ದ ಇವರು ಹಲವು ಜಿಲ್ಲೆಗಳಿಗೆ ತೆರಳಿ ಬಸ್ ನಿಲ್ದಾಣದಲ್ಲೇ ಮಹಿಳೆಯರ (womens )ಹಾಗೂ ಇತರ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿ ಪರ್ಸ್ ಕದ್ದು ಪರಾರಿಯಾಗುತಿದ್ದರು.
ಇದನ್ನೂ ಓದಿ:-Loksabha| ನಮ್ಮ ದೇಶವನ್ನಾಳಿದ ಪ್ರಧಾನಿಗಳೆಷ್ಟು ಗೊತ್ತಾ? ಚುನಾವಣೆ ಹೊಸ್ತಿಲಲ್ಲಿ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ.
ಈ ಹಿಂದೆ ಶಿರಸಿಯ ಬಸ್ ನಿಲ್ದಾಣ ,ನೀಲಕಣಿ (sirsi busstop)ಹಾಗೂ ಮುಂಡಗೋಡು ಬಸ್ ನಿಲ್ದಾಣದಲ್ಲಿ ವಿವಿಧ ಕಳ್ಳತನ ಮಾಡಿದ್ದರು. ಕಳ್ಳತನ ಕುರಿತು ಮುಂಡಗೋಡು ,ಶಿರಸಿ ಠಾಣೆಯಲ್ಲಿ ಪ್ರಕರಣ ದಾಖಲಾಗುತಿದ್ದಂತೆ ಕಾರ್ಯಾಚರಣೆಗೆ ಇಳಿದ ಸಿ.ಪಿ.ಐ BS ಲೋಕಾಪುರ ನೇತ್ರತ್ವದ ತಂಡ 20 ಸಾವಿರ ನಗದು, ಆರುಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.