ಎರಡು ಆಸ್ಪತ್ರೆಗಳು ಕೈಚೆಲ್ಲಿದ ಪ್ರಕರಣ – ಹೈರಿಸ್ಕ್ ಏಒರ್ಟಿಕ್ ಶಸ್ತ್ರಚಿಕಿತ್ಸೆ ಮೂಲಕ ರೋಗಿಯ ಜೀವ ಉಳಿಸಿದ ಮೆಡಿಕವರ್ ವೈದ್ಯರು

ಎರಡು ಆಸ್ಪತ್ರೆಗಳು ಕೈಚೆಲ್ಲಿದ್ದ ಗಂಭೀರ ಏಒರ್ಟಿಕ್ ಸಮಸ್ಯೆ ಹೊಂದಿದ್ದ ರೋಗಿಯ ಜೀವವನ್ನು ಬೆಂಗಳೂರಿನ ವೈಟ್‌ಫೀಲ್ಡ್‌ನ ಮೆಡಿಕವರ್ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಹೈ-ರಿಸ್ಕ್ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಉಳಿಸಿದೆ.
file 000000000324720889d9d122edd38b79 file 000000000324720889d9d122edd38b79

ಎರಡು ಆಸ್ಪತ್ರೆಗಳು ಕೈಚೆಲ್ಲಿದ ಪ್ರಕರಣ – ಹೈರಿಸ್ಕ್ ಏಒರ್ಟಿಕ್ ಶಸ್ತ್ರಚಿಕಿತ್ಸೆ ಮೂಲಕ ರೋಗಿಯ ಜೀವ ಉಳಿಸಿದ ಮೆಡಿಕವರ್ ವೈದ್ಯರು

ಬೆಂಗಳೂರು, ವೈಟ್‌ಫೀಲ್ಡ್: ಮತ್ತೊಂದು ಆಸ್ಪತ್ರೆಯಲ್ಲಿ ಏಒರ್ಟಿಕ್ ಸ್ಟೆಂಟ್ ಗ್ರಾಫ್ಟಿಂಗ್ ಚಿಕಿತ್ಸೆಗೆ ಒಳಗಾಗಿದ್ದ ರೋಗಿಯೊಬ್ಬರಿಗೆ ನಂತರ ಗಂಭೀರ ಸೋಂಕು ಕಾಣಿಸಿಕೊಂಡು, ಪ್ರಮುಖ ರಕ್ತನಾಳವಾದ ಏಒರ್ಟಾ ಉಬ್ಬುವ ಅಪಾಯಕರ ಸ್ಥಿತಿ ನಿರ್ಮಾಣವಾಗಿತ್ತು. ತೀವ್ರ ಬೆನ್ನುನೋವು ಹಾಗೂ ಜೀವಕ್ಕೆ ಅಪಾಯ ಉಂಟಾಗಿದ್ದ ಹಿನ್ನೆಲೆಯಲ್ಲಿ ಎರಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ, ಶಸ್ತ್ರಚಿಕಿತ್ಸೆ ಅತ್ಯಂತ ಅಪಾಯಕಾರಿಯಾಗಿದೆ ಎಂದು ತಿಳಿಸಿ ಹೆಚ್ಚಿನ ನಿರೀಕ್ಷೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಇದಾದ ಬಳಿಕ ರೋಗಿ ಮೆಡಿಕವರ್ ಆಸ್ಪತ್ರೆ, ವೈಟ್‌ಫೀಲ್ಡ್ ಬೆಂಗಳೂರಿಗೆ ಭೇಟಿ ನೀಡಿ ಸಲಹೆ ಪಡೆದರು. ಹಿರಿಯ ಹೃದಯ ತಜ್ಞರು ಹಾಗೂ ಕಾರ್ಡಿಯೋವ್ಯಾಸ್ಕುಲರ್ ಸೈನ್ಸಸ್ ನಿರ್ದೇಶಕರಾದ ಡಾ. ನಾಗ ಶ್ರೀನಿವಾಸ್ ನೇತೃತ್ವದ ತಜ್ಞರ ತಂಡ ರೋಗಿಯ ಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿ, ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲು ನಿರ್ಧರಿಸಿತು.

Advertisement

ವಾಸ್ಕ್ಯುಲರ್ ಶಸ್ತ್ರಚಿಕಿತ್ಸಕರಾದ ಡಾ. ಶ್ರೀರಾಮ್ ಹಾಗೂ ಡಾ. ಅರುಣ್ ರೆಡ್ಡಿ, ಕಾರ್ಡಿಯಾಕ್ ಅನಸ್ತೇಶಿಯಾಲಜಿಸ್ಟ್ ಡಾ. ಪಾಟೀಲ್, ಇಂಟೆನ್ಸಿವ್ ಕೇರ್ ತಜ್ಞೆ ಡಾ. ನಿತ್ಯ ಸೇರಿದಂತೆ ಬಹುಶಾಖಾ ತಜ್ಞರ ತಂಡ ಯಶಸ್ವಿಯಾಗಿ ಸಂಕೀರ್ಣ ಅಬ್ಡೊಮಿನಲ್ ಏಒರ್ಟಿಕ್ ಸ್ಟೆಂಟ್ ಎಕ್ಸ್‌ಪ್ಲಾಂಟೇಶನ್ ಹಾಗೂ ಏಒರ್ಟಿಕ್ ರೀಕನ್ಸ್ಟ್ರಕ್ಷನ್ ಶಸ್ತ್ರಚಿಕಿತ್ಸೆ ನೆರವೇರಿಸಿತು.

ಈ ಶಸ್ತ್ರಚಿಕಿತ್ಸೆಯಲ್ಲಿ ಹಿಂದೆ ಅಳವಡಿಸಲಾಗಿದ್ದ ಸೋಂಕಿತ ಅಬ್ಡೊಮಿನಲ್ ಏಒರ್ಟಿಕ್ ಸ್ಟೆಂಟ್ ಗ್ರಾಫ್ಟ್ ಅನ್ನು ತೆರವುಗೊಳಿಸಿ, ಹಾನಿಗೊಳಗಾದ ಏಒರ್ಟಾದ ಭಾಗವನ್ನು ಮರುನಿರ್ಮಾಣ ಮಾಡಲಾಯಿತು. ದೇಹದ ಪ್ರಮುಖ ಅಂಗಗಳು ಹಾಗೂ ಕಾಲುಗಳಿಗೆ ರಕ್ತ ಪೂರೈಸುವ ಮುಖ್ಯ ರಕ್ತನಾಳವಾದ ಏಒರ್ಟಾದ ಮೇಲೆ ಮರುಶಸ್ತ್ರಚಿಕಿತ್ಸೆ ನಡೆಸುವುದು ಅತ್ಯಂತ ಸವಾಲಿನದ್ದಾಗಿದ್ದು, ಹೆಚ್ಚಿನ ರಕ್ತಸ್ರಾವ ಹಾಗೂ ಅಂಗಾಂಗ ಹಾನಿಯ ಅಪಾಯವಿರುತ್ತದೆ.

ತಜ್ಞರ ತಂಡ ಸುಧಾರಿತ ಇಮೇಜಿಂಗ್ ತಂತ್ರಜ್ಞಾನ ಮತ್ತು ವಿಶೇಷ ವಾಸ್ಕ್ಯುಲರ್ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಬಳಸಿ ಸುರಕ್ಷಿತವಾಗಿ ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸಿ, ರಕ್ತಪ್ರವಾಹವನ್ನು ಸಹಜ ಸ್ಥಿತಿಗೆ ಮರುಸ್ಥಾಪಿಸಿದರು.

IMG 20260526 WA0004

ಶಸ್ತ್ರಚಿಕಿತ್ಸೆಯ ನಂತರ ರೋಗಿ ಉತ್ತಮವಾಗಿ ಚೇತರಿಸಿಕೊಂಡಿದ್ದು, ಪ್ರಸ್ತುತ ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ತಜ್ಞರು ಹೇಳುವಂತೆ, ಸಂಕೀರ್ಣ ಏಒರ್ಟಿಕ್ ರೋಗಗಳನ್ನು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಅಪಾಯ ಉಂಟಾಗಬಹುದು. ಆದ್ದರಿಂದ ಬೇಗನೆ ರೋಗ ಪತ್ತೆ ಹಾಗೂ ವಿಶೇಷ ತಜ್ಞರ ಚಿಕಿತ್ಸೆಯ ಅಗತ್ಯತೆಯನ್ನು ಒತ್ತಿಹೇಳಲಾಗಿದೆ. ಹೈ-ರಿಸ್ಕ್ ಏಒರ್ಟಿಕ್ ಸಮಸ್ಯೆಗಳನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಮೆಡಿಕವರ್ ಆಸ್ಪತ್ರೆಯ ಅತ್ಯಾಧುನಿಕ ಹೃದಯ ಹಾಗೂ ರಕ್ತನಾಳ ಚಿಕಿತ್ಸಾ ಸೇವೆಗಳು ಮಹತ್ವದ ಸಾಧನೆ ಮಾಡುತ್ತಿವೆ ಎಂದು ತಿಳಿಸಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement